ಬಂಟ್ವಾಳ : ತಾಲೂಕು ಮಟ್ಟದ ಶಿವಶರಣ‌ ಜಯಂತಿ ಆಚರಣೆ  - Karavali Times ಬಂಟ್ವಾಳ : ತಾಲೂಕು ಮಟ್ಟದ ಶಿವಶರಣ‌ ಜಯಂತಿ ಆಚರಣೆ  - Karavali Times

728x90

1 March 2022

ಬಂಟ್ವಾಳ : ತಾಲೂಕು ಮಟ್ಟದ ಶಿವಶರಣ‌ ಜಯಂತಿ ಆಚರಣೆ 

 ಬಂಟ್ವಾಳ, ಮಾರ್ಚ್ 01, 2022 (ಕರಾವಳಿ ಟೈಮ್ಸ್) : ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಶಿವಶರಣ ಜಯಂತಿ ಆಚರಣೆ ಮಂಗಳವಾರ (ಮಾ‌ 01) ಬಿ ಸಿ ರೋಡು ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆಯಿತು. ಕಾ

ಕಾರ್ಯಕ್ರಮ ಉದ್ಘಾಟಿಸಿದ ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ಮಾತನಾಡಿ, 12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣಕರ್ತರಾದ ಶಿವಶರಣರು ಅಸಮಾನತೆಗಳನ್ನು ತೊಲಗಿಸಲು ಪ್ರಯತ್ನಿಸಿದರು. ಆಡು ಭಾಷೆಯಲ್ಲಿ ವಚನಗಳನ್ನು ರಚಿಸಿ ಜನರ ಮನಃ ಪರಿವರ್ತಿಸುವ ಕೆಲಸ ಮಾಡಿದರು ಎಂದರು. 

 ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ಸಾರ್ವಜನಿಕರು ಭಾಗವಹಿಸಿದ್ದರು. ಚುನಾವಣಾ ಶಾಖೆಯ ನಾರಾಯಣ ಗೌಡ ಸ್ವಾಗತಿಸಿ ವಂದಿಸಿದರು.



  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ತಾಲೂಕು ಮಟ್ಟದ ಶಿವಶರಣ‌ ಜಯಂತಿ ಆಚರಣೆ  Rating: 5 Reviewed By: karavali Times
Scroll to Top