ದೇವರ ದಾಸಿಮಯ್ಯರ ಜನಪರ ಕಾಳಜಿಯ ವಚನಗಳು ಸಾರ್ವಕಾಲಿಕ ಮಹತ್ವದ್ದು : ನರೇಂದ್ರನಾಥ್ - Karavali Times ದೇವರ ದಾಸಿಮಯ್ಯರ ಜನಪರ ಕಾಳಜಿಯ ವಚನಗಳು ಸಾರ್ವಕಾಲಿಕ ಮಹತ್ವದ್ದು : ನರೇಂದ್ರನಾಥ್ - Karavali Times

728x90

18 April 2022

ದೇವರ ದಾಸಿಮಯ್ಯರ ಜನಪರ ಕಾಳಜಿಯ ವಚನಗಳು ಸಾರ್ವಕಾಲಿಕ ಮಹತ್ವದ್ದು : ನರೇಂದ್ರನಾಥ್

ಬಂಟ್ವಾಳ, ಎಪ್ರಿಲ್ 18, 2022 (ಕರಾವಳಿ ಟೈಮ್ಸ್) : ಮೊದಲ ವಚನಕಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ದೇವರ ದಾಸಿಮಯ್ಯ ಕಾಯಕವನ್ನೆ ಕೈಲಾಸ ಎಂದು ನಂಬಿ ಬದುಕಿದ ಸಾಧಕ. ಇವರ ಜನಪರ ಕಾಳಜಿಯ ವಚನಗಳು ಇಂದಿಗೂ ಪ್ರಸ್ತುತ ಎಂದು ಬಂಟ್ವಾಳ ತಾಲೂಕು ಕಚೇರಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ನರೇಂದ್ರನಾಥ್ ಮಿತ್ತೂರು ಹೇಳಿದರು. 

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಬಿ ಸಿ ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಭಾನುವಾರ (ಎ 17) ನಡೆದ ಬಂಟ್ವಾಳ ತಾಲೂಕು ಮಟ್ಟದ ದೇವರ ದಾಸಿಮಯ್ಯ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು. 

ಉಪತಹಸೀಲ್ದಾರ್ ರಾಜೇಶ್ ನಾಯ್ಕ್ ಅವರು ದೇವರ ದಾಸಿಮಯ್ಯ ಬಗ್ಗೆ ಸಾಂದರ್ಭಿಕವಾಗಿ ಮಾತನಾಡಿದರು. ತಾಲೂಕು ಕಚೇರಿ ಸಿಬ್ಬಂದಿಗಳು ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಸಹಾಯಕರು ಈ ಸಂದರ್ಭ ಉಪಸ್ಥಿತರಿದ್ದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ಸ್ವಾಗತಿಸಿ, ವಂದಿಸಿದರು.



  • Blogger Comments
  • Facebook Comments

0 comments:

Post a Comment

Item Reviewed: ದೇವರ ದಾಸಿಮಯ್ಯರ ಜನಪರ ಕಾಳಜಿಯ ವಚನಗಳು ಸಾರ್ವಕಾಲಿಕ ಮಹತ್ವದ್ದು : ನರೇಂದ್ರನಾಥ್ Rating: 5 Reviewed By: karavali Times
Scroll to Top