ಉಪವಾಸ ವೃತಾಚರಿಸದೆ ಈದ್ ಸಂಭ್ರಮಿಸುವವನ ಆತ್ಮಸಾಕ್ಷಿ ಚುಚ್ಚುತ್ತದೆ : ರಝಾಕ್ ಮಾಸ್ಟರ್ - Karavali Times ಉಪವಾಸ ವೃತಾಚರಿಸದೆ ಈದ್ ಸಂಭ್ರಮಿಸುವವನ ಆತ್ಮಸಾಕ್ಷಿ ಚುಚ್ಚುತ್ತದೆ : ರಝಾಕ್ ಮಾಸ್ಟರ್ - Karavali Times

728x90

6 May 2022

ಉಪವಾಸ ವೃತಾಚರಿಸದೆ ಈದ್ ಸಂಭ್ರಮಿಸುವವನ ಆತ್ಮಸಾಕ್ಷಿ ಚುಚ್ಚುತ್ತದೆ : ರಝಾಕ್ ಮಾಸ್ಟರ್

 ಬಂಟ್ವಾಳ, ಮೇ 07, 2022 (ಕರಾವಳಿ ಟೈಮ್ಸ್) : ಜಗತ್ತಿನಲ್ಲಿರುವ ವಿವಿಧ ಧರ್ಮಗಳಲ್ಲಿ ವಿವಿಧ ವೃತಾಚರಣೆಗಳಿವೆ. ವೃತಗಳ ಪೈಕಿ ಉಪವಾಸ ವೃತಕ್ಕೆ ಅತ್ಯಂತ ಹೆಚ್ಚಿನ ಮಹತ್ವ ಕಲ್ಪಿಸಲಾಗಿದೆ. ವಿವಿಧ ಧರ್ಮಗಳಲ್ಲೂ ಉಪವಾಸ ಆಚರಣೆ ಇದ್ದರೂ ಇಸ್ಲಾಮಿನ ಉಪವಾಸ ವೃತ ಭಿನ್ನವಾಗಿದ್ದು, ದೀರ್ಘ ಅವಧಿಯಲ್ಲಿ ನಿರಾಹಾರಿಗಳಾಗಿ ಸಕಲ ದೇಹೇಚ್ಚೆಗಳನ್ನೂ ನಿಯಂತ್ರಿಸಿ ಮುಂಜಾನೆಯಿಂದ ಮುಸ್ಸಂಜೆವರೆಗೂ ಯಾವುದೇ ಲೌಕಿಕ ಉದ್ದೇಶಗಳಿಲ್ಲದೆ ಕೇವಲ ದೇವ ಸಂಪ್ರೀತಿ ಬಯಸಿ ಧಾರ್ಮಿಕ ಆಚರಣೆಯಾಗಿ ಮಾಡಲಾಗುತ್ತದೆ ಎಂದು ಬಿ ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಹೇಳಿದರು. 

 ಬಂಟ್ವಾಳ ಲಯನ್ಸ್ ಕ್ಲಬ್ ವತಿಯಿಂದ ಬಿ ಸಿ ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಶುಕ್ರವಾರ (ಮೇ 6) ರಾತ್ರಿ ನಡೆದ ಲಯನ್ಸ್ ಜಿಲ್ಲಾ ಈದ್ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಗಾರರಾಗಿ ಮಾತನಾಡಿದ ಅವರು ಉಪವಾಸ ಎಂಬುದು ಈ ಲೋಕದಲ್ಲಿ ಧಾರ್ಮಿಕ ಉದ್ದೇಶದ ಜೊತೆಗೆ ಹೋರಾಟದ ಉದ್ದೇಶವನ್ನೂ ಸಾಬೀತುಪಡಿಸಿದ ಉದಾಹರಣೆಗಳು ಇತಿಹಾಸದಲ್ಲಿ ಸಾಬೀತಾಗಿದೆ. ಗಾಂಧೀಜಿಯವರ ಉಪವಾಸ ಸತ್ಯಾಗ್ರಹಗಳಿಂದ ಹಿಡಿದು ಇದುವರೆಗೆ ನಮ್ಮ ದೇಶದಲ್ಲಿ ಹಲವು ಉಪವಾಸ ಸತ್ಯಾಗ್ರಹಗಳು ನಡೆದು ಹೋರಾಟದಲ್ಲಿ ಸಫಲತೆಯನ್ನು ಕಂಡಿದೆ ಎಂದರು.

 ಇಸ್ಲಾಮಿನ ಕಠಿಣ ಉಪವಾಸ ವೃತಾಚರಣೆ ಕೈಗೊಂಡವರಿಗೆ ರಂಝಾನ್ ಮುಕ್ತಾಯದ ಬಳಿಕ ಶವ್ವಾಲ್ ಆರಂಭದ ದಿನ ಈದುಲ್ ಫಿತ್ರ್ ಹಬ್ಬ ಆಚರಿಸುವ ಮೂಲಕ ಸಂಭ್ರಮ ಆಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ರಂಝಾನ್ ಉಪವಾಸ ಆಚರಿಸದ ವ್ಯಕ್ತಿಗೆ ಈದ್ ಹಬ್ಬದಂದು ಸಂಭ್ರಮಿಸುವ ಯಾವುದೇ ನೈತಿಕತೆ ಇಲ್ಲದಾಗಿದೆ. ಎಲ್ಲರೊಂದಿಗೆ ಸೇರಿ ಆತ ಸಂಭ್ರಮ ಆಚರಿಸಿದರೂ ನೀನು ನಿನ್ನ ಭಗವಂತನನ್ನು ವಂಚಿಸಿದ್ದಿ ಎಂಬ ಸತ್ಯವನ್ನು ಆತನ ಆತ್ಮಸಾಕ್ಷಿ ಸದಾ ಆತನನ್ನು ಚುಚ್ಚಿ ಚುಚ್ಚಿ ಎಚ್ಚರಿಸುತ್ತದೆ ಎಂದು ವಿಶ್ಲೇಷಿಸಿದರು. ಲ

ಲಯನ್ಸ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.ಈದ್ ಸಂಭ್ರಮದ ಜಿಲ್ಲಾ ಪ್ರಧಾನ ಸಂಚಾಲಕ ಹಾಜಿ ಜಿ ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಲಯನ್ ಡಾ ಧೀರಜ್ ಹೆಬ್ರಿ ಧ್ವಜಾರೋಹಣಗೈದರು. 

 ಲಯನ್ಸ್ ಸ್ಥಾಪಕಾಧ್ಯಕ್ಷ ಡಾ ವಸಂತ ಬಾಳಿಗಾ, ನಿಕಟಪೂರ್ವ ಗವರ್ನರ್ ಡಾ ಗೀತಾ ಪ್ರಕಾಶ್ ಎ, ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ, ಉಪ ಗವರ್ನರ್ ಗಳಾದ ಡಾ ಮೆಲ್ವಿನ್ ಡಿಸೋಜ, ಭಾರತಿ ಬಿ ಎಂ, ಕ್ಯಾಬಿನೆಟ್ ಸೆಕ್ರೆಟರಿ ಶಶಿಧರ ಮಾರ್ಲ, ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

 ಇದೇ ವೇಳೆ ಬೆಳ್ತಂಗಡಿ-ನಡಾ ಸರಕಾರಿ ಪ್ರೌಢಶಾಲಾ ಶಿಕ್ಷಕ ಯಾಕೂಬ್ ಎಸ್, ಡಾಕ್ಟರೇಟ್ ಪದವೀಧರೆ ಡಾ ಲಿಫಾಂ ರೋಶನಾರಾ ಹಾಗೂ ವಿಶೇಷ ಚೇತನ ಸಾಧಕ ಅಹ್ಮದ್ ಕಬೀರ್ ಕಂಚಿನೋಡಿ-ಮೂರ್ಜೆ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಭಾಷಣಗಾರ ಅಬ್ದುಲ್ ರಝಾಕ್ ಅನಂತಾಡಿ ಅವರನ್ನು ಗೌರವಿಸಲಾಯಿತು. ಲಯನ್ಸ್ ಜಿಲ್ಲಾ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಅವರನ್ನು ಈದ್ ಸಂಭ್ರಮ ಕಮಿಟಿ ವತಿಯಿಂದ ಗೌರವಿಸಲಾಯಿತು.‌ 

 ಅಬೂಬಕ್ಕರ್ ಕುಕ್ಕಾಡಿ, ಅಬೂಬಕ್ಕರ್ ನೋಟರಿ, ಮುಹಮ್ಮದ್ ಖಲಂದರ್ ಕೆ ಸನ್ಮಾನಿತರ ಪರಿಚಯಗೈದರು. ಮೊಯಿದಿನ್ ಕುಂಞಿ ಮುಖ್ಯ ಭಾಷಣಗಾರರ ಪರಿಚಯ ಮಾಡಿದರು. ಸನ್ಮಾನಿತರ ಪರವಾಗಿ ಯಾಕುಬ್ ನಡಾ ಅನಿಸಿಕೆ ವ್ಯಕ್ತಪಡಿಸಿದರು. 

 ಲಯನ್ ಗಳಾದ ದಾಮೋದರ ಬಿ ಎಂ, ಟಿ ಮುಹಮ್ಮದ್ ಅಲಿ, ಅಬ್ದುಲ್ ಖಾದರ್, ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಜಯರಾಂ ದೇರಪ್ಪಜ್ಜನಮನೆ, ಕವನ್ ಕುಬೆವೂರು, ಲೋಕೇಶ್ ಉಳ್ಳಾಲ, ಹರೀಶ ಆಳ್ವ ಮೊದಲಾದವರು ಉಪಸ್ಥಿತರಿದ್ದರು. 

 ಹಾಜಿ ಜಿ ಮುಹಮ್ಮದ್ ಹನೀಫ್ ಸ್ವಾಗತಿಸಿ, ಅಬ್ದುಲ್ ಖಾದರ್ ಸಕಲೇಶಪುರ ವಂದಿಸಿದರು. ಬಿ ಎ ಮುಹಮ್ಮದ್ ಕಿರಾಅತ್ ಪಠಿಸಿದರು. ಮೈಮೂನಾ ಮೊಯಿದಿನ್ ಹಾಗೂ ರಾಧಾಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ಕಣ್ಣಂಗಾರ್ ಇಶಾ-ಅತುಸ್ಸುನ್ನ ದಫ್ ಸಮಿತಿ ಸದಸ್ಯರು ದಫ್ ಪ್ರದರ್ಶನ ಪ್ರಸ್ತುತ ಪಡಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಉಪವಾಸ ವೃತಾಚರಿಸದೆ ಈದ್ ಸಂಭ್ರಮಿಸುವವನ ಆತ್ಮಸಾಕ್ಷಿ ಚುಚ್ಚುತ್ತದೆ : ರಝಾಕ್ ಮಾಸ್ಟರ್ Rating: 5 Reviewed By: karavali Times
Scroll to Top