ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಮಳೆ ಹಾನಿ ಘಟನೆಗಳು - Karavali Times ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಮಳೆ ಹಾನಿ ಘಟನೆಗಳು - Karavali Times

728x90

2 July 2022

ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಮಳೆ ಹಾನಿ ಘಟನೆಗಳು

ಬಂಟ್ವಾಳ, ಜುಲೈ 02, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಹಾನಿ ಪ್ರಕರರಣ ಮುಂದುವರಿದಿದ್ದು, ಅಳಿಕೆ ಸಮೀಪದ ಮೂಡಾಯಿಬೆಟ್ಟು ನಿವಾಸಿ ಜಯಂತಿ ಕೋಂ ಪರಮೇಶ್ವರ್ ನಾಯ್ಕ್ ಅವರ ವಾಸದ ಮನೆಗೆ ಹಾನಿ ಸಂಭವಿಸಿ ಅಂದಾಜು 75 ಸಾವಿರ ರೂಪಾಯಿ ನಷ್ಟ ಉಂಟಾಗಿದೆ. 

ನರಿಕೊಂಬು ಗ್ರಾಮದ ಪುತ್ರೋಟಿಬೈಲು ನಿವಾಸಿ ನಾರಾಯಣಿ ಅವರ ಮನೆಯ ಗೋಡೆ ಬಿರುಕು ಬಿಟ್ಟಿದ್ದು ತೀವ್ರ ಹಾನಿಯಾಗಿದೆ. ಕೆದಿಲ ಗ್ರಾಮದ ತಾಳಿ ಪಡುಪು ನಿವಾಸಿ ಕೆ ಅಬ್ದುಲ್ ಮಜೀದ್ ಅವರ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿರುತ್ತದೆ ಎಂದು ತಾಲೂಕು ಕಚೇರಿ ಪ್ರಾಕೃತಿಕ ವಿಕೋಪ ವಿಭಾಗದ ವಿಷಯ ನಿರ್ವಾಹಕ ವಿಷು ಕುಮಾರ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ ತಾಲೂಕಿನಲ್ಲಿ ಮುಂದುವರಿದ ಮಳೆ ಹಾನಿ ಘಟನೆಗಳು Rating: 5 Reviewed By: karavali Times
Scroll to Top