ಬಲಿಷ್ಠ ಭಾರತ ಕಟ್ಟಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ : ಪುತ್ತೂರು ಬ್ಲಾಕ್ ಅಸಂಘಟಿತ ಕಾರ್ಯಕ್ರಮದಲ್ಲಿ ಅಬ್ಬಾಸ್ ಅಲಿ ಹೇಳಿಕೆ - Karavali Times ಬಲಿಷ್ಠ ಭಾರತ ಕಟ್ಟಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ : ಪುತ್ತೂರು ಬ್ಲಾಕ್ ಅಸಂಘಟಿತ ಕಾರ್ಯಕ್ರಮದಲ್ಲಿ ಅಬ್ಬಾಸ್ ಅಲಿ ಹೇಳಿಕೆ - Karavali Times

728x90

6 September 2022

ಬಲಿಷ್ಠ ಭಾರತ ಕಟ್ಟಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ : ಪುತ್ತೂರು ಬ್ಲಾಕ್ ಅಸಂಘಟಿತ ಕಾರ್ಯಕ್ರಮದಲ್ಲಿ ಅಬ್ಬಾಸ್ ಅಲಿ ಹೇಳಿಕೆ

ಪುತ್ತೂರು, ಸೆಪ್ಟೆಂಬರ್ 05, 2022 (ಕರಾವಳಿ ಟೈಮ್ಸ್) : ಸೌಹಾರ್ದ ಮತ್ತು ಸಹೃದಯಿ ಕೆಲಸಗಳಿಂದ ಬಲಿಷ್ಠ ಭಾರತವನ್ನು ಕಟ್ಟುವ ಅನಿವಾರ್ಯತೆ ಇದ್ದು, ಇದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ವಿಭಾಗದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಆಲಿ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ವಿಭಾಗ ಪುತ್ತೂರು ವಿಧಾನಸಭಾ ಕ್ಷೇತ್ರದ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಪುತ್ತೂರು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕೇವಲ ಮತ ರಾಜಕಾರಣ ನಡೆಸಿದ ಪಕ್ಷವಾಗಿರದೆ ಈ ದೇಶದ ಇತಿಹಾಸವೇ ಕಾಂಗ್ರೆಸ್ ಪಕ್ಷವಾಗಿದೆ. ಕಾಂಗ್ರೆಸ್ ಯಾವತ್ತೂ ಅಧಿಕಾರ, ಮತಗಳಿಕೆಯ ಏಕಮಾತ್ರ ಉದ್ದೇಶದಿಂದ ಈ ದೇಶದಲ್ಲಿ ಅಸ್ತಿತ್ವ ಉಳಿಸಿಕೊಂಡಿಲ್ಲ. ಜನರ ನಾಡಿಮಿಡಿತ ಅರಿತುಕೊಂಡು ಜನರಿಗಾಗಿ ಸೇವೆ ಸಲ್ಲಿಸಿ, ದೇಶಕ್ಕಾಗಿ ಅಗತ್ಯ ಬಂದಾಗ ಬಲಿದಾನಗೈದ ಇತಿಹಾಸ ಹೊಂದಿದೆ ಎಂದರು. 

ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ, ಪಕ್ಷ ಸಂಘಟನೆಗೆ ರಾಜ್ಯಾಧ್ಯಕ್ಷರು ಕೊಟ್ಟ ಸಂದೇಶ ಪಾಲಿಸಿಕೊಂಡು, ಭಾರತ ಜೋಡೋ ನಡಿಗೆಗೆ ನಾವು ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದರು. 

ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಮಾತಾಡಿಮ ಸ್ವಾತಂತ್ರ್ಯ ನಡಿಗೆಯ ಬಗ್ಗೆ ಮಾಡಿದ ಪಾದಯಾತ್ರೆ ಕಾರ್ಯಕ್ರಮ ಯಶಸ್ಸುಗೊಳಿಸಿದ ಪಕ್ಷದ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳು ತಿಳಿಸಿದರು. 

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ರೈ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಲಿ, ಅಸಂಘಟಿತ ಕಾರ್ಮಿಕ ಘಟಕದ ಪುತ್ತೂರು ಬ್ಲಾಕ್ ನೂತನ ಅಧ್ಯಕ್ಷ ಮೆಲ್ವಿನ್ ಮೆಂತರೊ, ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕದ ಪದಾಧಿಕಾರಿಗಳಾದ ನಿರಂಜನ್ ರೈ ಕೆ, ಅಬ್ದುಲ್ ಬಶೀರ್ ಮಂಗಳೂರು, ಶರೀಫ್ ಬಲ್ನಾಡ್ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಬಲಿಷ್ಠ ಭಾರತ ಕಟ್ಟಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ : ಪುತ್ತೂರು ಬ್ಲಾಕ್ ಅಸಂಘಟಿತ ಕಾರ್ಯಕ್ರಮದಲ್ಲಿ ಅಬ್ಬಾಸ್ ಅಲಿ ಹೇಳಿಕೆ Rating: 5 Reviewed By: karavali Times
Scroll to Top