ಲಯನ್ಸ್ ಪ್ರಾಂತೀಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ - Karavali Times ಲಯನ್ಸ್ ಪ್ರಾಂತೀಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ - Karavali Times

728x90

5 October 2022

ಲಯನ್ಸ್ ಪ್ರಾಂತೀಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ, ಅಕ್ಟೋಬರ್ 05, 2022 (ಕರಾವಳಿ ಟೈಮ್ಸ್) : ಲಯನ್ಸ್ ಸೇವಾ ಸಂಸ್ಥೆಯ ಪ್ರಾಂತೀಯ ಸಮ್ಮೇಳನ “ಧನ್ಯ” ನವೆಂಬರ್ 26 ರಂದು ಸಜಿಪಮೂಡ ಗ್ರಾಮದ ಕಂದೂರು ಬಜಾರ್ ಆಡಿಟೋರಿಯಂನಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬಂಟ್ವಾಳದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆಯಿತು.

ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಚೆಯರ್ ಪರ್ಸನ್ ವಸಂತ್ ಕುಮಾರ್ ಶೆಟ್ಟಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಡಾ. ವಸಂತ್ ಕುಮಾರ್ ಬಾಳಿಗ, ಸಮ್ಮೇಳನಾಧ್ಯಕ್ಷ ಮನೋರಂಜನ್ ಕೆ ಆರ್, ಪ್ರಾಂತೀಯ ಅಧ್ಯಕ್ಷ ಲಕ್ಷ್ಮಣ್ ಕುಲಾಲ್ ಅಗ್ರಬೈಲು, ಪ್ರಾಂತೀಯ ಸಮ್ಮೇಳನ ಸಮಿತಿಯ ಕಾರ್ಯದರ್ಶಿ ತಪೋಧನ್ ಶೆಟ್ಟಿ, ಕೋಶಾಧಿಕಾರಿ ಉಮೇಶ್ ಸಾಲ್ಯಾನ್, ಪ್ರಧಾನ ಸಂಯೋಜಕ ಶ್ರೀನಿವಾಸ ಪೂಜಾರಿ  ಮೆಲ್ಕಾರ್, ವಲಯಾಧ್ಯಕ್ಷರಾದ ರಮಾನಂದ ಎನ್, ವಿಜಯ ರೈ ಕೆ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಆಚಾರ್, ಕಾರ್ಯದರ್ಶಿ ಬಿ ಶಿವಾನಂದ ಬಾಳಿಗ. ಕೋಶಾಧಿಕಾರಿ ಜಗದೀಶ್ ಬಿ ಎಸ್, ಪ್ರಮುಖರಾದ ದಾಮೋದರ ಬಿ ಎಂ, ಪುಷ್ಪರಾಜ ಶೆಟ್ಟಿ,  ಪ್ರತಿಭಾ ಬಿ ಶೆಟ್ಟಿ, ಬಿ ಸತ್ಯನಾರಾಯಣ ರಾವ್, ಮದ್ವರಾಜ್ ಕಲ್ಮಾಡಿ,  ಸಂತೋಷ್ ಡಿ’ಸೋಜಾ, ಪ್ರಶಾಂತ್ ಕೋಟ್ಯಾನ್, ದೇವಿಕಾ ದಾಮೋದರ್, ಹೆನ್ರಿ ಡಿ’ಸೋಜಾ, ಜಯಂತ್ ಶೆಟ್ಟಿ, ಸುನಿಲ್ ಬಿ, ಡಾ ಧೀರಜ್, ಉಮೇಶ್ ಪಿ ಮೊದಲಾದವರು ಕಾರ್ಯಕ್ರಮದಲ್ಲಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಲಯನ್ಸ್ ಪ್ರಾಂತೀಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ Rating: 5 Reviewed By: karavali Times
Scroll to Top