ಅಕ್ರಮ ಜಾನುವಾರು ವಧೆ ಮಾಡುತ್ತಿದ್ದ ಮನೆಗೆ ದಾಳಿ ನಡೆಸಿ ಆರೋಪಿ ದಸ್ತಗಿರಿ ಮಾಡಿದ ಪೂಂಜಾಲಕಟ್ಟೆ ಪೊಲೀಸರು - Karavali Times ಅಕ್ರಮ ಜಾನುವಾರು ವಧೆ ಮಾಡುತ್ತಿದ್ದ ಮನೆಗೆ ದಾಳಿ ನಡೆಸಿ ಆರೋಪಿ ದಸ್ತಗಿರಿ ಮಾಡಿದ ಪೂಂಜಾಲಕಟ್ಟೆ ಪೊಲೀಸರು - Karavali Times

728x90

28 November 2022

ಅಕ್ರಮ ಜಾನುವಾರು ವಧೆ ಮಾಡುತ್ತಿದ್ದ ಮನೆಗೆ ದಾಳಿ ನಡೆಸಿ ಆರೋಪಿ ದಸ್ತಗಿರಿ ಮಾಡಿದ ಪೂಂಜಾಲಕಟ್ಟೆ ಪೊಲೀಸರು

ಬಂಟ್ವಾಳ, ನವೆಂಬರ್ 28, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಡಗಕಜೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಡವರಕಲ್ಲು ಸಮೀಪದ ಕುದ್ರು ಎಂಬಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಇಸ್ಮಾಯಿಲ್ ಎಂಬವರ ಮನೆ ಮೇಲೆ ಸೋಮವಾರ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ದನದ ಮಾಂಸ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. 



ಆರೋಪಿ ಇಸ್ಮಾಯಿಲ್ ಮನೆ ಹಿಂಭಾಗದ ಕಟ್ಟಡದಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಜಾನುವಾರು ವಧೆ ಮಾಡುತ್ತಿದ್ದ ಮನೆಗೆ ದಾಳಿ ನಡೆಸಿ ಆರೋಪಿ ದಸ್ತಗಿರಿ ಮಾಡಿದ ಪೂಂಜಾಲಕಟ್ಟೆ ಪೊಲೀಸರು Rating: 5 Reviewed By: karavali Times
Scroll to Top