ಜನವರಿ 22 ರಂದು ಬಿ.ಸಿ.ರೋಡು ಯಕ್ಷ ಮಿತ್ರರು ಆಶ್ರಯದಲ್ಲಿ “ಭಾರತ ಜನನಿ” ಯಕ್ಷಗಾನ ಬಯಲಾಟ - Karavali Times ಜನವರಿ 22 ರಂದು ಬಿ.ಸಿ.ರೋಡು ಯಕ್ಷ ಮಿತ್ರರು ಆಶ್ರಯದಲ್ಲಿ “ಭಾರತ ಜನನಿ” ಯಕ್ಷಗಾನ ಬಯಲಾಟ - Karavali Times

728x90

10 January 2023

ಜನವರಿ 22 ರಂದು ಬಿ.ಸಿ.ರೋಡು ಯಕ್ಷ ಮಿತ್ರರು ಆಶ್ರಯದಲ್ಲಿ “ಭಾರತ ಜನನಿ” ಯಕ್ಷಗಾನ ಬಯಲಾಟ

ಬಂಟ್ವಾಳ, ಜನವರಿ 09, 2023 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು-ಕೈಕಂಬದ ಯಕ್ಷ ಮಿತ್ರರು ಇವರ ಆಶ್ರಯದಲ್ಲಿ 14ನೇ ವರ್ಷದ ಕಲಾಕಾಣಿಕೆ ಪ್ರಯುಕ್ತ ಯಕ್ಷಗಾನ ಕಾರ್ಯಕ್ರಮ ಜನವರಿ 22ರಂದು ಭಾನುವಾರ ಸಂಜೆ 6 ಗಂಟೆಯಿಂದ ಬಿ ಸಿ ರೋಡಿನ ಹೋಟೆಲ್ ರಂಗೋಲಿ ಹೊರಾಂಗಣದ ರಂಗ ಮಂಟಪದಲ್ಲಿ ಶ್ರೀ ಕೋದಂಡರಾಮ ಕೃಪಾ ಪೆÇೀಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರು “ಭಾರತ ಜನನಿ” ಎಂಬ ಪೌರಾಣಿಕ ಕಥಾ ಭಾಗವನ್ನು ಯಕ್ಷಗಾನ ಬಯಲಾಟವಾಗಿ ಆಡಿ ತೋರಿಸಲಿರುವರು. 



ಕಾರ್ಯಕ್ರಮದಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಲಾಗುವುದು. ಸಿವಿಲ್ ಇಂಜಿನಿಯರ್ ಸುಧೀರ್ ಶೆಟ್ಟಿ ಅವರು ಸನ್ಮಾನ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಯಕ್ಷಗಾನ ಅರ್ಥಧಾರಿ ಶಂಭು ಶರ್ಮ ವಿಟ್ಲ ಭಾಗವಹಿಸಲಿದ್ದಾರೆ ಎಂದು ಕೈಕಂಬ ಯಕ್ಷ ಮಿತ್ರರು ಆಡಳಿತ ಮಂಡಳಿ ಪ್ರಕಟನೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಜನವರಿ 22 ರಂದು ಬಿ.ಸಿ.ರೋಡು ಯಕ್ಷ ಮಿತ್ರರು ಆಶ್ರಯದಲ್ಲಿ “ಭಾರತ ಜನನಿ” ಯಕ್ಷಗಾನ ಬಯಲಾಟ Rating: 5 Reviewed By: karavali Times
Scroll to Top