ಸುಳ್ಯ : ಶ್ರೀರಾಮ್ ಫೈನಾನ್ಸ್ ಪ್ರಾಯೋಜತ್ವದಲ್ಲಿ 8.2 ಲಕ್ಷ ವಿದ್ಯಾರ್ಥಿ ನಿಧಿ ವಿತರಣೆ - Karavali Times ಸುಳ್ಯ : ಶ್ರೀರಾಮ್ ಫೈನಾನ್ಸ್ ಪ್ರಾಯೋಜತ್ವದಲ್ಲಿ 8.2 ಲಕ್ಷ ವಿದ್ಯಾರ್ಥಿ ನಿಧಿ ವಿತರಣೆ - Karavali Times

728x90

21 January 2023

ಸುಳ್ಯ : ಶ್ರೀರಾಮ್ ಫೈನಾನ್ಸ್ ಪ್ರಾಯೋಜತ್ವದಲ್ಲಿ 8.2 ಲಕ್ಷ ವಿದ್ಯಾರ್ಥಿ ನಿಧಿ ವಿತರಣೆ

ಸುಳ್ಯ ಜನವರಿ 21, 2023 (ಕರಾವಳಿ ಟೈಮ್ಸ್) : ಶ್ರೀರಾಮ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಇದರ ಸುಳ್ಯ ಶಾಖಾ ವತಿಯಿಂದ ಸುಳ್ಯ ತಾಲೂಕಿನ ಆಯ್ದ ಅರ್ಹ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಶುಕ್ರವಾರ (ಜನವರಿ 20) ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. 


ಕಂಪೆನಿಯ ಸಂಸ್ಥೆಯ ಝೋನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಕಾರ್ಯಕ್ರಮ ಉದ್ಘಾಟಿಸಿದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ವಿದ್ಯಾರ್ಥಿ ನಿಧಿ ವಿತರಿಸಿದರು. 


ಮುಖ್ಯ ಅತಿಥಿಗಳಾಗಿ  ನಿವೃತ್ತ ಪ್ರಾಂಶುಪಾಲ ಕೆ ಆರ್ ಗಂಗಾಧರ, ಸುಳ್ಯ ತಾ ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಎಸ್, ಸುಳ್ಯ ಲಾರಿ ಚಾಲಕ-ಮಾಲಕರ ಸಂಘದ ಅಧ್ಯಕ್ಷ ದಿನೇಶ್ ಅಡ್ಕಾರ್, ಐವರ್ನಾಡು ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಎಸ್ ಎನ್ ಮನ್ಮಥ ಭಾಗವಹಿಸಿದ್ದರು.

ಆರ್ ಬಿ ಎಚ್ ಮಹೇಶ್ ಕುಮಾರ್ ಸಿ ಎಚ್, ಆರ್ ಎಸ್ ಎಚ್ ಚಂದ್ರಹಾಸ ಆಳ್ವ ಮೊದಲಾದವರು ಉಪಸ್ಥಿತರಿದ್ದರು. 

ಸಂಸ್ಥೆಯ ರೀಜನಲ್ ಬ್ಯುಸಿನೆಸ್ ಹೆಡ್ ಚೇತನ್ ಅರಸ್ ಸ್ವಾಗತಿಸಿ, ಸುಳ್ಯ ಶಾಖಾಧಿಕಾರಿ ಆನಂದ ಕೆ ವಂದಿಸಿದರು. ನವೀನ್ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ 57 ಮಂದಿ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 3,500/- ರಂತೆ 1 ಲಕ್ಷದ 99 ಸಾವಿರದ 500 ರೂಪಾಯಿ ಹಾಗೂ 201 ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂಪಾಯಿಯಂತೆ 6.3 ಲಕ್ಷ ರೂಪಾಯಿ ಸೇರಿ ಒಟ್ಟು 258 ಮಂದಿ ವಿದ್ಯಾರ್ಥಿಗಳಿಗೆ 8 ಲಕ್ಷದ 2 ಸಾವಿರದ 500 ರೂಪಾಯಿ ವಿದ್ಯಾರ್ಥಿ ನಿಧಿ ವಿತರಿಸಲಾಯಿತು. 

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ಶ್ರೀರಾಮ್ ಫೈನಾನ್ಸ್ ಪ್ರಾಯೋಜತ್ವದಲ್ಲಿ 8.2 ಲಕ್ಷ ವಿದ್ಯಾರ್ಥಿ ನಿಧಿ ವಿತರಣೆ Rating: 5 Reviewed By: karavali Times
Scroll to Top