ಪುತ್ತೂರು ನಗರ-ಗ್ರಾಮಾಂತರ ಪೊಲೀಸರಿಗೆ ದೊಂಬಿ ನಿಗ್ರಹ ಕವಾಯತು ತರಬೇತಿ - Karavali Times ಪುತ್ತೂರು ನಗರ-ಗ್ರಾಮಾಂತರ ಪೊಲೀಸರಿಗೆ ದೊಂಬಿ ನಿಗ್ರಹ ಕವಾಯತು ತರಬೇತಿ - Karavali Times

728x90

26 February 2023

ಪುತ್ತೂರು ನಗರ-ಗ್ರಾಮಾಂತರ ಪೊಲೀಸರಿಗೆ ದೊಂಬಿ ನಿಗ್ರಹ ಕವಾಯತು ತರಬೇತಿ

ಮಂಗಳೂರು, ಫೆಬ್ರವರಿ 27, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆ ಯ ಪುತ್ತೂರು ನಗರ ಹಾಗೂ ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಮೈದಾನದಲ್ಲಿ ಆಂಟಿ ರಯೋಟ್ ಡ್ರಿಲ್ (ದೊಂಬಿ ನಿಗ್ರಹ ಕವಾಯತು) ತರಭೇತಿಯನ್ನು ನೀಡಲಾಯಿತು.

ಈ ಮೂಲಕ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ತುರ್ತು ಸಂದರ್ಭಗಳಲ್ಲಿ ಯಾವ ರೀತಿ ಸ್ಪಂದಿಸಬೇಕು, ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾದಾಗ ಯಾವ ರೀತಿ ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸಿ ಎದುರಿಸಬೇಕು ಎಂಬುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಲಾಯಿತು.

ಈ ಸಂದರ್ಭ ಜಿಲ್ಲಾ ಎಸ್ಪಿ ಡಾ ವಿಕ್ರಮ್ ಅಮಾಟೆ ಅವರು ಸ್ಥಳದಲ್ಲಿ ಹಾಜರಿದ್ದು, ತರಬೇತಿಯಲ್ಲಿ ಭಾಗವಹಿಸಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ತರಬೇತಿಯ ಉದ್ದೇಶ ಹಾಗೂ ಕರ್ತವ್ಯಗಳ ಬಗ್ಗೆ ತಿಳುವಳಿಕೆ ನೀಡಿದರು. 

ಇಂತಹ ತರಬೇತಿಗಳಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ವೃತ್ತಿ ಕೌಶಲ್ಯ, ಜ್ಞಾನ, ಮಾನಸಿಕ ಸ್ಥೈರ್ಯ, ಆತ್ಮ ವಿಶ್ವಾಸಗಳನ್ನು ಹೆಚ್ಚಿಸಿಕೊಂಡು ವೃತ್ತಿಪರತೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ವೃತ್ತ ಹಾಗೂ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಂತಹ ತರಭೇತಿಗಳನ್ನು ನೀಡಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ನಗರ-ಗ್ರಾಮಾಂತರ ಪೊಲೀಸರಿಗೆ ದೊಂಬಿ ನಿಗ್ರಹ ಕವಾಯತು ತರಬೇತಿ Rating: 5 Reviewed By: karavali Times
Scroll to Top