ಮೂಡೂರು-ಪಡೂರು 'ಬಂಟ್ವಾಳ ಕಂಬಳ'ದ ಕರೆ ಪೂಜೆ, ಗಣಹೋಮ ಹಾಗೂ ಕಚೇರಿ ಉದ್ಘಾಟನೆ - Karavali Times ಮೂಡೂರು-ಪಡೂರು 'ಬಂಟ್ವಾಳ ಕಂಬಳ'ದ ಕರೆ ಪೂಜೆ, ಗಣಹೋಮ ಹಾಗೂ ಕಚೇರಿ ಉದ್ಘಾಟನೆ - Karavali Times

728x90

2 March 2023

ಮೂಡೂರು-ಪಡೂರು 'ಬಂಟ್ವಾಳ ಕಂಬಳ'ದ ಕರೆ ಪೂಜೆ, ಗಣಹೋಮ ಹಾಗೂ ಕಚೇರಿ ಉದ್ಘಾಟನೆ

ಬಂಟ್ವಾಳ, ಮಾರ್ಚ್ 03, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಸಮೀಪದ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮಾ 4 ರಂದು ಶನಿವಾರ (ನಾಳೆ) ನಡೆಯುವ ಮೂಡೂರು-ಪಡೂರು “ಬಂಟ್ವಾಳ ಕಂಬಳ”ದ ಪ್ರಯುಕ್ತ ಕರೆ ಪೂಜೆ, ಗಣಹೋಮ ಹಾಗೂ ಕಂಬಳ ಸಮಿತಿಯ ಕಚೇರಿ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ (ಮಾ 3) ಬೆಳಿಗ್ಗೆ ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ನೇತೃತ್ವದಲ್ಲಿ ಕಂಬಳ ಗದ್ದೆಯಲ್ಲಿ ನಡೆಯಿತು.

ಈ ಸಂದರ್ಭ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್, ಸಂಚಾಲಕ ಬಿ. ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಪಾಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಕೋಶಾಧಿಕಾರಿ ಪಿಲಿಫ್ ಫ್ರಾಂಕ್, ಸದಸ್ಯರುಗಳಾದ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸುವರ್ಣ ಜೈನ್ ಮೊದಲಾದವರು ಉಪಸ್ಥಿತರಿದ್ದರು.

  ಶನಿವಾರ ಬೆಳಿಗ್ಗೆ ಸರ್ವ ಧರ್ಮೀಯ ನಾಯಕರ ಸಮಾಗಮದ ಬಳಿಕ ಕಂಬಳದ ಅದ್ದೂರಿ ಉದ್ಘಾಟನೆ ನಡೆಯಲಿದೆ ಎಂದು ಕಂಬಳ ಸಮಿತಿ ಪದಾಧಿಕಾರಿಗಳು ತಿಳಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಮೂಡೂರು-ಪಡೂರು 'ಬಂಟ್ವಾಳ ಕಂಬಳ'ದ ಕರೆ ಪೂಜೆ, ಗಣಹೋಮ ಹಾಗೂ ಕಚೇರಿ ಉದ್ಘಾಟನೆ Rating: 5 Reviewed By: karavali Times
Scroll to Top