ಮೂಡೂರು-ಪಡೂರು 'ಬಂಟ್ವಾಳ ಕಂಬಳ'ಕ್ಕೆ ನಾವೂರು ಕೂಡಿಬೈಲು ಪೂರ್ಣ ಸಜ್ಜು : ರಮಾನಾಥ ರೈ ಸಹಿತ ಕಂಬಳ ಸಮಿತಿ ಸದಸ್ಯರು ಅಂತಿಮ ಸಿದ್ದತೆಯಲ್ಲಿ - Karavali Times ಮೂಡೂರು-ಪಡೂರು 'ಬಂಟ್ವಾಳ ಕಂಬಳ'ಕ್ಕೆ ನಾವೂರು ಕೂಡಿಬೈಲು ಪೂರ್ಣ ಸಜ್ಜು : ರಮಾನಾಥ ರೈ ಸಹಿತ ಕಂಬಳ ಸಮಿತಿ ಸದಸ್ಯರು ಅಂತಿಮ ಸಿದ್ದತೆಯಲ್ಲಿ - Karavali Times

728x90

3 March 2023

ಮೂಡೂರು-ಪಡೂರು 'ಬಂಟ್ವಾಳ ಕಂಬಳ'ಕ್ಕೆ ನಾವೂರು ಕೂಡಿಬೈಲು ಪೂರ್ಣ ಸಜ್ಜು : ರಮಾನಾಥ ರೈ ಸಹಿತ ಕಂಬಳ ಸಮಿತಿ ಸದಸ್ಯರು ಅಂತಿಮ ಸಿದ್ದತೆಯಲ್ಲಿ

ಬಂಟ್ವಾಳ, ಮಾರ್ಚ್ 03, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಸಮೀಪದ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ಮಾ 4 ರಂದು ಶನಿವಾರ (ನಾಳೆ) ನಡೆಯುವ ಮೂಡೂರು-ಪಡೂರು “ಬಂಟ್ವಾಳ ಕಂಬಳ”ಕ್ಕೆ ಕೂಡಿಬೈಲು ಪೂರ್ಣ ಪ್ರಮಾಣದಲ್ಲಿ ಸಿದ್ದಗೊಂಡಿದ್ದು, ಮಾಜಿ ಸಚಿಬ ಬಿ ರಮಾನಾಥ ರೈ ಸಹಿತ ಕಂಬಳ ಸಮಿತಿಯ ಪದಾಧಿಕಾರಿಗಳು ಶುಕ್ರವಾರ ಸಂಜೆ ಕಂಬಳ ಗದ್ದೆಯಲ್ಲೇ ಬೀಡು ಬಿಟ್ಟಿದ್ದು ವ್ಯವಸ್ಥೆಗೆ ಅಂತಿಮ ಸ್ಪರ್ಶ ನಡೆಯುತ್ತಿದೆ .

ಶನಿವಾರ (ಮಾ 4)  ಬೆಳಿಗ್ಗೆ 8.45 ಕ್ಕೆ ಸರಿಯಾಗಿ ಸರ್ವ ಧರ್ಮೀಯರ ಸಮಾಗಮದೊಂದಿಗೆ ಕಂಬಳ ಕೂಟಕ್ಕೆ ಅದ್ದೂರಿ ಚಾಲನೆ ದೊರೆಯಲಿದೆ. 

ಸೋಲೂರು ಕರ್ನಾಟಕ ಆರ್ಯ-ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪತಮಹಂಸ ಸ್ವಾಮೀಜಿ, ಅಲ್ಲಿಪಾದೆ ಸಂತ ಅಂಥೋನಿ ಚರ್ಚ್ ಧರ್ಮಗುರು ವಂದನೀಯ ಫೆಡ್ರಿಕ್ ಮೊಂತೆರೋ, ಕಾವಳಕಟ್ಟೆ ಹಝ್ರತ್ ಡಾ ಮುಹಮ್ಮದ್ ಫಾಝಿಲ್ ರಝ್ವಿ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆ. ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ನಾವೂರು ಗ್ರಾ ಪಂ ಅಧ್ಯಕ್ಷ ಬಿ ಉಮೇಶ್ ಕುಲಾಲ್, ಉಪಾಧ್ಯಕ್ಷೆ ಲವೀನಾ ವಿಲ್ಮಾ ಮೊರಾಸ್, ಶ್ರೀ ಕ್ಷೇತ್ರ ಕಾರಿಂಜ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ ಜಿನರಾಜ ಅರಿಗ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಪಾಧ್ಯಕ್ಷೆ ಜೆಸಿಂತಾ ಡಿ'ಸೋಜ,  ರಾಜ್ಯ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ಉದ್ಯಮಿ ಭುವನೇಶ್ ಪಚ್ಚಿನಡ್ಕ, ರಚನಾ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಲಿಯೋ ಫೆರ್ನಾಂಡಿಸ್ ಸರಪಾಡಿ ಭಾಗವಹಿಸಲಿದ್ದಾರೆ.

ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಮಟ್ಟದ, ಜಿಲ್ಲಾ ಮಟ್ಟದ ಗಣ್ಯರು ಭಾಗವಹಿಸಲಿದ್ದಾರೆ.

ಈ ಸಂದರ್ಭ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೊಡ್ರಿಗಸ್, ಸಂಚಾಲಕ ಬಿ. ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಪಾಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್, ಕೋಶಾಧಿಕಾರಿ ಪಿಲಿಫ್ ಫ್ರಾಂಕ್, ಸದಸ್ಯರುಗಳಾದ ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸುವರ್ಣ ಜೈನ್, ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಪದ್ಮನಾಭ ರೈ, ಬಾಲಕೃಷ್ಣ ಆಳ್ವ ಕೊಡಾಜೆ, ಚಂದ್ರಶೇಖರ ಪೂಜಾರಿ ಕೋರ್ಯ, ಉಮೇಶ್ ಕುಲಾಲ್ ನಾವೂರು, ರಾಜೀವ್ ಶೆಟ್ಟಿ ಎಡ್ತೂರು, ಸುದರ್ಶನ ಜೈನ್, ಆಲ್ಬರ್ಟ್ ಮೆನೇಜಸ್, ಹಸೈನಾರ್, ಲೋಲಾಕ್ಷ ಶೆಟ್ಟಿ, ಡೆಂಝಿನ್ ನೊರೊನ್ಹಾ ಅಲ್ಲಿಪಾದೆ, ಶಬೀರ್ ಸಿದ್ದಕಟ್ಟೆ, ಉಮೇಶ್ ನಾಯಿಲ, ಮಜೀದ್ ಬೋಗೋಡಿ, ಆರಿಫ್ ಮೆಲ್ಕಾರ್ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಮೂಡೂರು-ಪಡೂರು 'ಬಂಟ್ವಾಳ ಕಂಬಳ'ಕ್ಕೆ ನಾವೂರು ಕೂಡಿಬೈಲು ಪೂರ್ಣ ಸಜ್ಜು : ರಮಾನಾಥ ರೈ ಸಹಿತ ಕಂಬಳ ಸಮಿತಿ ಸದಸ್ಯರು ಅಂತಿಮ ಸಿದ್ದತೆಯಲ್ಲಿ Rating: 5 Reviewed By: karavali Times
Scroll to Top