ವಿಟ್ಲ : ತರಕಾರಿ ಅಂಗಡಿಗೆ ಬೆಂಕಿ ಬಿದ್ದು ನಗದು ಹಾಗೂ ವಸ್ತುಗಳು ಭಸ್ಮ - Karavali Times ವಿಟ್ಲ : ತರಕಾರಿ ಅಂಗಡಿಗೆ ಬೆಂಕಿ ಬಿದ್ದು ನಗದು ಹಾಗೂ ವಸ್ತುಗಳು ಭಸ್ಮ - Karavali Times

728x90

27 April 2020

ವಿಟ್ಲ : ತರಕಾರಿ ಅಂಗಡಿಗೆ ಬೆಂಕಿ ಬಿದ್ದು ನಗದು ಹಾಗೂ ವಸ್ತುಗಳು ಭಸ್ಮ





ವಿಟ್ಲ ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ


ವಿಟ್ಲ (ಕರಾವಳಿ ಟೈಮ್ಸ್) : ತರಕಾರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ನಗದು ಹಾಗೂ ವಸ್ತುಗಳು ಸಂಪೂರ್ಣವಾಗಿ  ಸುಟ್ಟು ಕರಕಲಾದ  ಘಟನೆ ವಿಟ್ಲದ ನಾಲ್ಕು ಮಾರ್ಗದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ವಿಟ್ಲದ ಮಂಗಳೂರು ರಸ್ತೆಯಲ್ಲಿರುವ ಬಿ.ಕೆ. ತರಕಾರಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೆ ವಿಟ್ಲ ಪೊಲೀಸರು ಆಗಮಿಸಿ ಅಂಗಡಿ ಬೀಗ ಮುರಿದು ವಸ್ತುಗಳನ್ನು ಹೊರ ಹಾಕಿದ್ದಾರೆ. ಪಕ್ಕದಲ್ಲಿರುವ ಬೇಕರಿ ಅಂಗಡಿಗೂ ಬೆಂಕಿ ಆವರಿಸಿದೆ. ತರಕಾರಿ ಅಂಗಡಿಯಲ್ಲಿದ್ದ ನಗದು ಹಾಗೂ ತರಕಾರಿ, ಇನ್ನಿತರ ಸಾಮಗ್ರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲ : ತರಕಾರಿ ಅಂಗಡಿಗೆ ಬೆಂಕಿ ಬಿದ್ದು ನಗದು ಹಾಗೂ ವಸ್ತುಗಳು ಭಸ್ಮ Rating: 5 Reviewed By: karavali Times
Scroll to Top