ರಾಹುಲ್ ಗಾಂಧಿ ಹುಟ್ಟು ಹಬ್ಬ ಭಿನ್ನ ಚೇತನರೊಂದಿಗೆ ಆಚರಿಸಿದ ಪುತ್ತೂರು ಕೈ ಮುಖಂಡರು - Karavali Times ರಾಹುಲ್ ಗಾಂಧಿ ಹುಟ್ಟು ಹಬ್ಬ ಭಿನ್ನ ಚೇತನರೊಂದಿಗೆ ಆಚರಿಸಿದ ಪುತ್ತೂರು ಕೈ ಮುಖಂಡರು - Karavali Times

728x90

20 June 2020

ರಾಹುಲ್ ಗಾಂಧಿ ಹುಟ್ಟು ಹಬ್ಬ ಭಿನ್ನ ಚೇತನರೊಂದಿಗೆ ಆಚರಿಸಿದ ಪುತ್ತೂರು ಕೈ ಮುಖಂಡರು





ಪುತ್ತೂರು (ಕರಾವಳಿ ಟೈಮ್ಸ್) : ಎಐಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಅವರ ನೇತೃತ್ವದಲ್ಲಿ ವಿಶೇಷ ವಿಕಲ ಚೇತನರಿರುವ ಪ್ರಜ್ಞಾ ಸಲಹಾ ಕೇಂದ್ರದಲ್ಲಿರುವವರಿಗೆ ಸಿಹಿತಿಂಡಿ, ಹಣ್ಣು ಹಂಪಲು ವಿತರಿಸಲಾಯಿತು.

    ಈ ಸಂದರ್ಭ ಪುತ್ತೂರು ಪುರಸಭೆ ಮಾಜಿ ಅಧ್ಯಕ್ಷ ಯು. ಲೋಕೇಶ್ ಹೆಗ್ಡೆ, ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್, ರಾಜ್ಯ ಕೊಂಕಣಿ ಅಕಾಡಮಿ ಮಾಜಿ ಸದಸ್ಯ ದಾಮೋದರ್ ಭಂಡಾರ್ಕರ್, ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾ ಕಾರ್ಯದರ್ಶಿ ಸುಭಾಶ್ ರೈ,  ರಾಜ್ಯ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಕಾರ್ಯದರ್ಶಿ ಕೆ.ಸಿ. ಅಶೋಕ್ ಶೆಟ್ಟಿ, ಕೆಮ್ಮಿಂಜೆ ಶಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವ ಬೆದ್ರಾಳ, ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಸಂಚಾಲಕ ಜಗದೀಶ್ ಕಜೆ, ಪ್ರಮುಖರಾದ ಮಂಜುನಾಥ ಸುವರ್ಣ, ಹಂಝ ಹಾಜಿ, ಹನೀಫ್ ಬಗ್ಗುಮೂಲೆ, ರೆಹಮಾನ್ ಸಂಪ್ಯ, ರವಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.








  • Blogger Comments
  • Facebook Comments

0 comments:

Post a Comment

Item Reviewed: ರಾಹುಲ್ ಗಾಂಧಿ ಹುಟ್ಟು ಹಬ್ಬ ಭಿನ್ನ ಚೇತನರೊಂದಿಗೆ ಆಚರಿಸಿದ ಪುತ್ತೂರು ಕೈ ಮುಖಂಡರು Rating: 5 Reviewed By: karavali Times
Scroll to Top