ವಿಶ್ವ ಪರಿಸರ ದಿನದ ಅಂಗವಾಗಿ ವಿಟ್ಲ ಡಿ.ವೈ.ಎಫ್.ಐ ವತಿಯಿಂದ ಗಿಡ ವಿತರಣೆ - Karavali Times ವಿಶ್ವ ಪರಿಸರ ದಿನದ ಅಂಗವಾಗಿ ವಿಟ್ಲ ಡಿ.ವೈ.ಎಫ್.ಐ ವತಿಯಿಂದ ಗಿಡ ವಿತರಣೆ - Karavali Times

728x90

5 June 2020

ವಿಶ್ವ ಪರಿಸರ ದಿನದ ಅಂಗವಾಗಿ ವಿಟ್ಲ ಡಿ.ವೈ.ಎಫ್.ಐ ವತಿಯಿಂದ ಗಿಡ ವಿತರಣೆ



ವಿಟ್ಲ (ಕರಾವಳಿ ಟೈಮ್ಸ್) : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ಗಿಡಗಳ ವಿತರಣಾ ಕಾರ್ಯಕ್ರಮ ವಿಟ್ಲ ಕಚೇರಿಯಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಅಬ್ದುಲ್ ಖಾದರ್ ಕುಕ್ಕಾಜೆ ಮಾತನಾಡಿ ಇಂದು ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಗಿಡಗಳನ್ನು ನೆಡುವ ಮೂಲಕ ಮುಂದಿನ ತಲೆಮಾರಿಗೆ ನೈರ್ಮಲ್ಯಯುತವಾದ ಪರಿಸರವನ್ನು ನಿರ್ಮಿಸಿ ಕೊಡಲು ನಾವು ಮುಂದಾಗಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ, ವೆಲ್‍ಪೇರ್ ಪಾರ್ಟಿ ಆಫ್ ಇಂಡಿಯಾದ ಪುತ್ತೂರು ವಲಯ ಕಾರ್ಯದರ್ಶಿ ಇಶಾಕ್, ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ಮಾರ್ಗದರ್ಶಕ ಮಹಮ್ಮದ್ ಇಕ್ಬಾಲ್ ಹಳೆಮನೆ, ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ತುಳಸೀದಾಸ್ ವಿಟ್ಲ ಭಾಗವಹಿಸಿದ್ದರು.

ವಿಟ್ಲ ವಲಯ ಕಾರ್ಯದರ್ಶಿ ಜಮೀಲ್ ಎಂ.ಕೆ. ಸ್ವಾಗತಿಸಿ, ಅಧ್ಯಕ್ಷ ನುಜುಂ ಅಳಿಕೆ ವಂದಿಸಿದರು, ಸಮಿತಿ ಮುಖಂಡರಾದ ಇರ್ಪಾನ್, ಒಕ್ಕೆತ್ತೂರು, ಶಹೀದ್ ಶೈನ್, ಸಲೀಂ ಮಲಿಕ್, ತಮೀಮ್ ಎಂ.ಕೆ. ಮೊದಲಾದವರು ಉಪಸ್ಥಿತರಿದ್ದರು.




  • Blogger Comments
  • Facebook Comments

0 comments:

Post a Comment

Item Reviewed: ವಿಶ್ವ ಪರಿಸರ ದಿನದ ಅಂಗವಾಗಿ ವಿಟ್ಲ ಡಿ.ವೈ.ಎಫ್.ಐ ವತಿಯಿಂದ ಗಿಡ ವಿತರಣೆ Rating: 5 Reviewed By: karavali Times
Scroll to Top