ತಲಕಾವೇರಿಯಲ್ಲಿ ನಾಪತ್ತೆಯಾದ ಅರ್ಚಕರಲ್ಲಿ ಓರ್ವರು ಬಂಟ್ವಾಳದ ಕಳ್ಳಿಗೆ‌ ನಿವಾಸಿ - Karavali Times ತಲಕಾವೇರಿಯಲ್ಲಿ ನಾಪತ್ತೆಯಾದ ಅರ್ಚಕರಲ್ಲಿ ಓರ್ವರು ಬಂಟ್ವಾಳದ ಕಳ್ಳಿಗೆ‌ ನಿವಾಸಿ - Karavali Times

728x90

6 August 2020

ತಲಕಾವೇರಿಯಲ್ಲಿ ನಾಪತ್ತೆಯಾದ ಅರ್ಚಕರಲ್ಲಿ ಓರ್ವರು ಬಂಟ್ವಾಳದ ಕಳ್ಳಿಗೆ‌ ನಿವಾಸಿ



ಬಂಟ್ವಾಳ (ಕರಾವಳಿ ಟೈಮ್ಸ್) : ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಗುಡ್ಡ ಜರಿದು ನಾಪತ್ತೆಯಾದ ಅರ್ಚಕರ ಪೈಕಿ ರವಿಕಿರಣ್ (25) ಎಂಬವರು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ಎಂದು ತಿಳಿದು ಬಂದಿದೆ.

ಇಲ್ಲಿನ ನಿವಾಸಿ ರಾಮಕೃಷ್ಣ ರಾವ್-ರೇಣುಕಾ ದಂಪತಿಯ ಪುತ್ರರಾಗಿರುವ ರವಿಕಿರಣ್ ಕಳೆದ 2 ವರ್ಷಗಳಿಂದ ತಲಕಾವೇರಿ ಕ್ಷೇತ್ರದಲ್ಲಿ ಮುಖ್ಯ ಅರ್ಚಕರ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಮನೆಗೆ ಬಂದಿದ್ದ ಇವರು ಪ್ರಧಾನ ಅರ್ಚಕರ ಕರೆಯ ಮೇರೆಗೆ ಮತ್ತೆ ಮೇ ತಿಂಗಳ ಅಂತ್ಯದ ವೇಳೆಗೆ ತಲಕಾವೇರಿಗೆ ಮರಳಿದ್ದರು ಎನ್ನಲಾಗಿದೆ.

 ಪೌರೋಹಿತ್ಯ ಸಹಾಯಕ ವೃತ್ತಿಯನ್ನು ಮಾಡುತ್ತಿದ್ದ ಅವರು ರಾವ್ ದಂಪತಿಯ ಅವಳಿ ಮಕ್ಕಳಲ್ಲಿ ಒಬ್ಬರು. ಸದ್ಯ ತಲಕಾವೇರಿಯಲ್ಲಿ ಗುಡ್ಡ ಜರಿದು ನಾಪತ್ತೆಯಾದವರಲ್ಲಿ ಸೇರಿದ್ದಾರೆ ಎನ್ನಲಾಗಿದ್ದು, ಇವರ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ.



  • Blogger Comments
  • Facebook Comments

0 comments:

Post a Comment

Item Reviewed: ತಲಕಾವೇರಿಯಲ್ಲಿ ನಾಪತ್ತೆಯಾದ ಅರ್ಚಕರಲ್ಲಿ ಓರ್ವರು ಬಂಟ್ವಾಳದ ಕಳ್ಳಿಗೆ‌ ನಿವಾಸಿ Rating: 5 Reviewed By: karavali Times
Scroll to Top