ಬೆಂಕಿ ಅವಘಡದಿಂದ ಸುಟ್ಟು ಹೋದ ಅಂಗಡಿ ಮಾಲಕರಿಗೆ ಶಾಸಕ ಖಾದರ್ ಸ್ಪಂದನೆ - Karavali Times ಬೆಂಕಿ ಅವಘಡದಿಂದ ಸುಟ್ಟು ಹೋದ ಅಂಗಡಿ ಮಾಲಕರಿಗೆ ಶಾಸಕ ಖಾದರ್ ಸ್ಪಂದನೆ - Karavali Times

728x90

9 August 2020

ಬೆಂಕಿ ಅವಘಡದಿಂದ ಸುಟ್ಟು ಹೋದ ಅಂಗಡಿ ಮಾಲಕರಿಗೆ ಶಾಸಕ ಖಾದರ್ ಸ್ಪಂದನೆ




 ಮಂಗಳೂರು (ಕರಾವಳಿ ಟೈಮ್ಸ್) : ನಗರದ ಬಂದರ್ ಎಂಬಲ್ಲಿ ಅಂಗಡಿಯೊಂದು ಇತ್ತೀಚೆಗೆ ಬೆಂಕಿ ಅವಘಡಕ್ಕೆ ಗುರಿಯಾಗಿ ಸಂಪೂರ್ಣ ಸುಟ್ಟು ಹೋಗಿತ್ತು. ಈ ಬಗ್ಗೆ ಕ್ರಮ ವಹಿಸಿದ ಮಂಗಳೂರು ಶಾಸಕ ಯು ಟಿ ಖಾದರ್ ಅವರು ನಷ್ಟದಿಂದ ಸಂಕಷ್ಟಕ್ಕೊಳಗಾದ ಆ ಕುಟುಂಬಕ್ಕೆ ದುಬೈ ಉದ್ಯಮಿ ಅಲ್ತಾಫ್ ಎಂಬವರ ನೆರವಿನಿಂದ 1 ಲಕ್ಷ ರೂಪಾಯಿ ಧನ ಸಹಾಯ ನೀಡಿದ್ದಾರೆ.


ಈ ಸಂದರ್ಭ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಸಂಶುದ್ದೀನ್ ಬಂದರ್,  ಸಿ ಎಂ ಮುಸ್ತಫಾ , ಬಿ ಎಸ್ ಇಂತಿಯಾಝ್ ಮೊದಲಾದವರು ಉಪಸ್ಥಿತರಿದ್ದರು. ಬಡವರ ಸೇವೆ ಮಾಡುವ ಶಾಸಕರ ಸೇವಾ ಕಾಳಜಿಯನ್ನು ಬ್ಲಾಕ್ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಶ್ಲಾಘಿಸಿದ್ದಾರೆ. 






  • Blogger Comments
  • Facebook Comments

0 comments:

Post a Comment

Item Reviewed: ಬೆಂಕಿ ಅವಘಡದಿಂದ ಸುಟ್ಟು ಹೋದ ಅಂಗಡಿ ಮಾಲಕರಿಗೆ ಶಾಸಕ ಖಾದರ್ ಸ್ಪಂದನೆ Rating: 5 Reviewed By: karavali Times
Scroll to Top