ಬಂಟ್ವಾಳ, ನ. 02, 2020 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಶಾಖಾ ವತಿಯಿಂದ ಮೀಲಾದ್ ಮಾಸಾಚರಣೆಯ ಅಂಗವಾಗಿ ಮೌಲಿದ್ ಮಜ್ಲಿಸ್ ಹಾಗೂ ಹುಬ್ಬುರ್ರಸೂಲ್ ಪ್ರಭಾಷಣ ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಛೇರಿಯಲ್ಲಿ ಭಾನುವಾರ ರಾತ್ರಿ ನಡೆಯಿತು.
ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಮೌಲಿದ್ ಫೈಝಿ ಮೌಲಿದ್ ಮಜ್ಲಿಸ್ ನೇತೃತ್ವ ವಹಿಸಿದ್ದರು.
ಬಂಟ್ವಾಳ ವಲಯ ಇಬಾದ್ ಚೇರ್ಮನ್ ಖಲೀಲ್ ದಾರಿಮಿ ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹುವ ಅಲೈಹಿ ವಸಲ್ಲಮರ ಕಾಲದ ವಿಶೇಷತೆ ಬಗ್ಗೆ ವಿವರಿಸಿದರು.
ಅಬ್ದುಲ್ ಖಾದರ್ ಮದನಿ, ಅಬೂಬಕರ್ ಮದನಿ, ಅನ್ಸಾಫ್ ಮುಸ್ಲಿಯಾರ್ ನಂದಾವರ, ಹನೀಫ್ ಯಮಾನಿ, ಎಸ್ಕೆಎಸ್ಸೆಫ್ ಶಾಖಾ ಪದಾಧಿಕಾರಿಗಳಾದ ಅಬ್ದುಲ್ ಮಜೀದ್ ಬೋಳಂಗಡಿ, ಇಸಾಕ್ ಫೇಶನ್ ವೇರ್, ಅಬ್ದುಲ್ ಖಾದರ್ ಹಾಜಿ, ಹಾಜಿ ಅಬೂಬಕರ್ ಎನ್.ಬಿ., ಪಿ.ಬಿ. ಹಾಮದ್ ಹಾಜಿ, ಮುಹಮ್ಮದ್ ಶಫೀಕ್, ಬಶೀರ್ ಕೆ4, ಅಬ್ದುಲ್ ಜಬ್ಬಾರ್ ಬುರ್ಖಾ, ಖಾದರ್ ಪೈಂಟರ್, ಸಲಾಂ ಸೆಂಟರಿಂಗ್, ರಫೀಕ್ ಇನೋಳಿ, ಸಿ.ಪಿ. ಶಾಕಿರ್, ಮುಹಮ್ಮದ್ ಬಂಗ್ಲೆಗುಡ್ಡೆ, ಹನೀಫ್ ಬೋಗೋಡಿ ಮೊದಲಾದವರು ಭಾಗವಹಿಸಿದ್ದರು. ಬಶೀರ್ ಬೇಕರಿ ಸ್ವಾಗತಿಸಿ, ಅಬ್ದುಲ್ ಅಝೀಝ್ ಪಿ.ಐ. ವಂದಿಸಿದರು.
0 comments:
Post a Comment