ವಿದ್ಯಾರ್ಥಿಗಳೇ ಶಾಲೆಯ ಸೌಂದರ್ಯ, ಕೊರೊನಾದಿಂದ ಈ ಸೌಂದರ್ಯ ಕಳೆಗಟ್ಟಿದೆ : ಆನಂದ ಶಂಭೂರು - Karavali Times ವಿದ್ಯಾರ್ಥಿಗಳೇ ಶಾಲೆಯ ಸೌಂದರ್ಯ, ಕೊರೊನಾದಿಂದ ಈ ಸೌಂದರ್ಯ ಕಳೆಗಟ್ಟಿದೆ : ಆನಂದ ಶಂಭೂರು - Karavali Times

728x90

17 November 2020

ವಿದ್ಯಾರ್ಥಿಗಳೇ ಶಾಲೆಯ ಸೌಂದರ್ಯ, ಕೊರೊನಾದಿಂದ ಈ ಸೌಂದರ್ಯ ಕಳೆಗಟ್ಟಿದೆ : ಆನಂದ ಶಂಭೂರು



ಬಂಟ್ವಾಳ, ನ 17, 2020 (ಕರಾವಳಿ ಟೈಮ್ಸ್) : ಶಾಲೆಯು ಶೈಕ್ಷಣಿಕವಾಗಿ ಮುಂದುವರಿಯಲು ಮತ್ತು ಸ್ವಚ್ಛವಾಗಿ ಕಂಗೊಳಿಸಲು ಆ ಶಾಲೆಯ ಮಕ್ಕಳೇ ಕಾರಣರಾಗಿರುತ್ತಾರೆ. ಆದರೆ ಪ್ರಸ್ತುತ ಕೊರೋನಾ ಕಾರಣದಿಂದಾಗಿ ಶಾಲೆಗಳು ಹೂಗಳಿಲ್ಲದ ತೋಟದಂತಾಗಿದೆ ಎಂದು ಬಿಜೆಪಿ ಬಂಟ್ವಾಳ ತಾಲೂಕು ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಆನಂದ ಶಂಭೂರು ಹೇಳಿದರು. 

ವೀರಕಂಭ ಸಮೀಪದ ಮಜಿ ಸರಕಾರಿ ಶಾಲೆಯಲ್ಲಿ ಬಂಟ್ವಾಳ ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಶಾಲಾ ವಠಾರ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ, ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ಅರಳ, ಉಪಾಧ್ಯಕ್ಷ ಮೋಹನ್‍ದಾಸ್, ಕಾರ್ಯದರ್ಶಿ ಸಂತೋಷ್ ಪೂಜಾರಿ, ತಾಲೂಕು ಸಹಕಾರಿ ಭಾರತಿ ನಿರ್ದೇಶಕ ವಿಶ್ವನಾಥ ಎಂ., ಮಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಂಜೀವ ಮೂಲ್ಯ, ಕಲ್ಲಡ್ಕ ರೈತರ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಕೊರಗಪ್ಪ ನಾಯ್ಕ ಸಿಂಗೆರಿ, ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಪದ್ಮನಾಭ ಮೂಲ್ಯ, ವೀರಕಂಭ ಗ್ರಾ ಪಂ ಮಾಜಿ ಉಪಾಧ್ಯಕ್ಷೆ ಪ್ರೇಮಾ ಆಚಾರ್ಯ, ಸದಸ್ಯ ಜಯಂತಿ ಜನಾರ್ಧನ್, ಸೇವಂತಿ, ಬಿಜೆಪಿ ವೀರಕಂಭ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಬಾಯಿಲ, ಮಹಾಲಕ್ಷ್ಮಿ ಗಣೇಶಕೊಡಿ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸದಸ್ಯ ವೀರಪ್ಪ ಮೂಲ್ಯ ಬೆತ್ತ ಸರವು ಸ್ವಾಗತಿಸಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ಬಂಗೆರ ಬಾಯಿಲ ವಂದಿಸಿದರು.









  • Blogger Comments
  • Facebook Comments

0 comments:

Post a Comment

Item Reviewed: ವಿದ್ಯಾರ್ಥಿಗಳೇ ಶಾಲೆಯ ಸೌಂದರ್ಯ, ಕೊರೊನಾದಿಂದ ಈ ಸೌಂದರ್ಯ ಕಳೆಗಟ್ಟಿದೆ : ಆನಂದ ಶಂಭೂರು Rating: 5 Reviewed By: karavali Times
Scroll to Top