ಸಮ್ಯಕ್ತ್ ಜೈನ್ ಗೆ 'ಮಿಲನ್ನ ಯುವ ಪ್ರತಿಭೆ'‌ ಗೌರವ - Karavali Times ಸಮ್ಯಕ್ತ್ ಜೈನ್ ಗೆ 'ಮಿಲನ್ನ ಯುವ ಪ್ರತಿಭೆ'‌ ಗೌರವ - Karavali Times

728x90

23 January 2021

ಸಮ್ಯಕ್ತ್ ಜೈನ್ ಗೆ 'ಮಿಲನ್ನ ಯುವ ಪ್ರತಿಭೆ'‌ ಗೌರವ

ಕಡಬ, ಜ. 24, 2021 (ಕರಾವಳಿ ಟೈಮ್ಸ್) : ಭಾರತೀಯ ಜೈನ್ ಮಿಲನ್ ವಲಯ-8, ಇಜಿಲಂಪಾಡಿ ಶಾಖೆಯ ವತಿಯಿಂದ ಬಹುಮುಖ ಪ್ರತಿಭೆ, ಯುವ ಸಾಹಿತಿ, ರಾಜ್ಯ-ಅಂತರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಿಲನ್ ಸದಸ್ಯ, ಹೊಸಂಗಡಿ ಬಸದಿ ಸಮ್ಯಕ್ತ್ ಜೈನ್ ಅವರನ್ನು ಮಿಲನ್ನ ಯುವ ಪ್ರತಿಭೆ ಗೌರವ ಪ್ರದಾನ ಮಾಡಿ ಪುರಸ್ಕರಿಸಲಾಯಿತು. ಇಜಿಲಂಪಾಡಿ ಬೀಡು ಶುಭಾಕರ ಹೆಗ್ಗಡೆ ಸವರ ಪ್ರಾಯೋಜಕತ್ವದಲ್ಲಿ ನಡೆದ ವಲಯದ ಮಾಸಿಕ ಸಭೆಯಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ಭಾರತೀಯ ಜೈನ್ ಮಿಲನ್ ವಲಯ-8 ಮಂಗಳೂರು ವಿಭಾಗದ ನಿರ್ದೇಶಕ ರಾಜವರ್ಮ ಆರಿಗ, ಇಚಿಲಂಪಾಡಿ ಜೈನ್ ಮಿಲನ್ ಅಧ್ಯಕ್ಷ ಮಹಾವೀರ್ ಜೈನ್, ಕಾರ್ಯದರ್ಶಿ ಸುರಭಿ ಜಯಕುಮಾರ್, ಸ್ಥಾಪಕಾಧ್ಯಕ್ಷ ರವಿರಾಜ್ ಶೆಟ್ಟಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಸಮ್ಯಕ್ತ್ ಜೈನ್ ಅವರು ಕಡಬ ತಾಲೂಕು, ನೂಜಿಬಾಳ್ತಿಲ ನಿವಾಸಿ ಧರಣೇಂದ್ರ ಇಂದ್ರ-ಮಂಜುಳಾ ದಂಪತಿಯ ಪುತ್ರರಾಗಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಸಮ್ಯಕ್ತ್ ಜೈನ್ ಗೆ 'ಮಿಲನ್ನ ಯುವ ಪ್ರತಿಭೆ'‌ ಗೌರವ Rating: 5 Reviewed By: karavali Times
Scroll to Top