ಮಂಗಳೂರು, ಸೆಪ್ಟೆಂಬರ್ 27, 2021 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆಯ ವತಿಯಿಂದ ಮಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ ಪ್ರತಿನಿಧಿ (ಏಜೆಂಟ್) ಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯ ವಯೋಮಿತಿ ಕನಿಷ್ಠ 18 ಹಾಗೂ ಗರಿಷ್ಠ 50ರ ಒಳಗಿರಬೇಕಿದ್ದು, ಎಸ್. ಎಸ್.ಎಲ್. ಸಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ಈ ಹುದ್ದೆ ಅಂಚೆ ಇಲಾಖೆಯ ಖಾಯಂ ಹುದ್ದೆ ಆಗಿರುವುದಿಲ್ಲ. ಯಾವುದೇ ಖಾಯಂ ವೇತನವೂ ಇರುವುದಿಲ್ಲ. ಇದು ಕೇವಲ ಕಮಿಷನ್ ಆಧಾರಿತ ಉದ್ಯೋಗವಾಗಿದೆ.
ಉದ್ಯೋಗಿಗಳು, ಸ್ವ ಉದ್ಯೋಗಿಗಳು, ಇತರೆ ವಿಮೆ ಕಂಪೆನಿಗಳ ಮಾಜಿ ಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ನಿವೃತ್ತ ಶಿಕ್ಷಕರು ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರ ಹಾಗೂ ದಾಖಲೆಗಳನ್ನು ಗೂಗಲ್ ಫಾರ್ಮ್ ಲಿಂಕ್ (https://bit.ly/3iPV3ts) ನ್ನು ಒತ್ತಿ ಅಕ್ಟೋಬರ್ 7 ರ ಒಳಗೆ ಸಲ್ಲಿಸಬೇಕು. ಈ ಲಿಂಕ್ ಮಂಗಳೂರು ಅಂಚೆ ವಿಭಾಗದ ಫೇಸ್ ಬುಕ್ ಪೇಜಲ್ಲೂ ಲಭ್ಯವಿದೆ. ಕಮಿಷನ್ ಮಾಹಿತಿಗಾಗಿ https://bit.ly/3udWeqm ಗೆ ಭೇಟಿ ನೀಡಬಹುದು.
ಆಯ್ದ ಅಭ್ಯರ್ಥಿಗಳಿಗೆ ನೇರ ಸಂದರ್ಶನ ದಿನಾಂಕವನ್ನು ಗೂಗಲ್ ಫಾರ್ಮ್ ನಲ್ಲಿ ನಮೂದಿಸುವ ಅಭ್ಯರ್ಥಿಗಳ ಇಮೇಲ್ ವಿಳಾಸಕ್ಕೆ ತಿಳಿಸಲಾಗುವುದು. ಇಲಾಖೆಯ ಅಂಚೆ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್ ಪೋರ್ಟಲ್ www.indiapost.gov.in ಗೆ ಭೇಟಿ ನೀಡಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment