ಮಂಚಿ : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ದುರುಪಯೋಗ ಪಡಿಸುತ್ತಿರುವ ಸರಕಾರದ ಕ್ರಮಕ್ಕೆ ಕಾರ್ಮಿಕರ ಸಭೆಯಲ್ಲಿ ಆಕ್ರೋಶ - Karavali Times ಮಂಚಿ : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ದುರುಪಯೋಗ ಪಡಿಸುತ್ತಿರುವ ಸರಕಾರದ ಕ್ರಮಕ್ಕೆ ಕಾರ್ಮಿಕರ ಸಭೆಯಲ್ಲಿ ಆಕ್ರೋಶ - Karavali Times

728x90

10 October 2021

ಮಂಚಿ : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ದುರುಪಯೋಗ ಪಡಿಸುತ್ತಿರುವ ಸರಕಾರದ ಕ್ರಮಕ್ಕೆ ಕಾರ್ಮಿಕರ ಸಭೆಯಲ್ಲಿ ಆಕ್ರೋಶ

ಬಂಟ್ವಾಳ, ಅಕ್ಟೋಬರ್ 10, 2021 (ಕರಾವಳಿ ಟೈಮ್ಸ್) : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವನ್ನು ಸರಕಾರ ಇತರ ಉದ್ದೇಶಗಳಿಗೆ ಬಳಸುವ ಮೂಲಕ ಕಟ್ಟಡ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವುದನ್ನು ಮಂಚಿ ಗ್ರಾಮದ ಕಟ್ಟಡ ಕಾರ್ಮಿಕರ ಸಭೆಯಲ್ಲಿ ಖಂಡಿಸಲಾಯಿತು.  

ಕಾರ್ಮಿಕರಿಗೆ ಕೋವಿಡ್ ಪರಿಹಾರ 3 ಸಾವಿರ ರೂಪಾಯಿ ಕಲ್ಯಾಣ ಮಂಡಳಿಯಿಂದ ನೀಡಲು ಆದೇಶವಾಗಿದ್ದು  ಪರಿಹಾರ ಹಣ ಬೆರಳೆಣಿಕೆಯ ಕಾರ್ಮಿಕರಿಗೆ ಮಾತ್ರ ಸಿಕ್ಕಿದ್ದು, ಹೆಚ್ಚಿನ ನೋಂದಾಯಿತ ಕಾರ್ಮಿಕರಿಗೆ ಸಿಗದೆ ಅನ್ಯಾಯವಾಗಿದೆ. ಅಲ್ಲದೆ ಕಲ್ಯಾಣ ಮಂಡಳಿಯಿಂದ ಪ್ರತಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಯಾಗಿದ್ದು ಆಹಾರ ಕಿಟ್ ಎಲ್ಲಾ ಕಾರ್ಮಿಕರಿಗೆ ಸಿಕ್ಕಿಲ್ಲ. ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆಹಾರ ಕಿಟ್ ವಿತರಣೆಯಲ್ಲಿ ಮದ್ಯ ಪ್ರವೇಶಿಸಿ ತಮ್ಮ ಬೆಂಬಲಿಗರಿಗೆ ಮಾತ್ರ ಆಹಾರ ಕಿಟ್ ವಿತರಿಸಿ ನಿಜವಾದ ನೋಂದಾಯಿತ ಕಾರ್ಮಿಕರಿಗೆ ಅನ್ಯಾಯವೆಸಗಿದ್ದಾರೆ. 

ತಕ್ಷಣ ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ಧನ ಹಾಗೂ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಒತ್ತಾಯಿಸಿ ಕಟ್ಟಡ ಕಾರ್ಮಿಕರ ಸಂಘ ಸಿಐಟಿಯು ವತಿಯಿಂದ ಮಂಚಿ ಗ್ರಾಮದ ಕಟ್ಟಡ ಕಾರ್ಮಿಕರ ಸಮಿತಿ ರಚನಾ ಸಭೆ ನಡೆಯಿತು.

ಸಭೆಯಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಭಾಗವಹಿಸಿ ಮಾತನಾಡಿ ಸಂಘಟನೆಗಳ ಹೋರಾಟದಿಂದ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಯಾಗಿದ್ದು. ಈಗ ಕಲ್ಯಾಣ ಮಂಡಳಿಯ ಹಣವನ್ನು ಸರಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು.  

ಮುಖ್ಯ ಅತಿಥಿಯಾಗಿ ಕಾರ್ಮಿಕ ಮುಖಂಡರಾದ ಲಿಯಾಕತ್ ಖಾನ್, ಡಿವೈಎಫ್‍ಐ ಮುಖಂಡರಾದ ತುಳಸೀದಾಸ್ ವಿಟ್ಲ, ಪ್ರಮುಖರಾದ ವಾಮನ ಪೂಜಾರಿ ಮೊದಲಾದವರು ಭಾಗವಹಿಸಿದ್ದರು. 

ಸಭೆಯಲ್ಲಿ ನೂತನ ಗ್ರಾಮ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ವಾಮನ ಪೂಜಾರಿ, ಉಪಾದ್ಯಕ್ಷರುಗಳಾಗಿ ಶಿವಾನಂದ, ರಫೀಕ್, ಕಾರ್ಯದರ್ಶಿಯಾಗಿ ಚಂದ್ರಶೇಖರ, ಜೊತೆ ಕಾರ್ಯದರ್ಶಿಗಳಾಗಿ ಸದಾಶಿವ, ಉದಯ ಕುಮಾರ್, ಕೋಶಧಿಕಾರಿಯಾಗಿ ಸುಂದರ ಹಾಗೂ 60 ಜನರ  ಕಾರ್ಯಕಾರಿ ಸಮಿತಿ ರಚಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಮಂಚಿ : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣ ದುರುಪಯೋಗ ಪಡಿಸುತ್ತಿರುವ ಸರಕಾರದ ಕ್ರಮಕ್ಕೆ ಕಾರ್ಮಿಕರ ಸಭೆಯಲ್ಲಿ ಆಕ್ರೋಶ Rating: 5 Reviewed By: karavali Times
Scroll to Top