ಬೆಳ್ತಂಗಡಿ : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ವಾರಂಟ್ ಆರೋಪಿಯ ಬಂಧನ - Karavali Times ಬೆಳ್ತಂಗಡಿ : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ವಾರಂಟ್ ಆರೋಪಿಯ ಬಂಧನ - Karavali Times

728x90

10 April 2022

ಬೆಳ್ತಂಗಡಿ : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ವಾರಂಟ್ ಆರೋಪಿಯ ಬಂಧನ

ಬೆಳ್ತಂಗಡಿ, ಎಪ್ರಿಲ್ 10, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಿಲ್ಯ ಗ್ರಾಮದ ಗೋಳಿಕಟ್ಟೆಯಲ್ಲಿ ನ್ಯಾಯಾಲಯದ ವಾರಂಟ್ ಹಿಡಿದುಕೊಂಡು ಬಂಧನಕ್ಕೆ ಬಂದಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಬ್ದುಲ್ ಲತೀಫ್ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್ ಠಾಣಾ ಎಚ್ ಸಿ ನಾರಾಯಣ ಗೌಡ ಅವರು ತನ್ನ ಸಹೊದ್ಯೋಗಿ ಪಿಸಿ ಲೋಹಿತ್ ಜೊತೆ ಸೇರಿ ಕುಂದಾಪುರ ಎಸಿಜೆ ಮತ್ತು ಜೆಎಂಎಪ್‍ಸಿ ನ್ಯಾಯಾಲಯದ ಸಿಸಿ ನಂಬ್ರ 1799/22 ರ ಪ್ರಕಾರ ಬಂಧಿಸಲು ತೆರಳಿದ್ದ ವೇಳೆ ಆರೋಪಿ ಇತರ ಆರೋಪಿಗಳಾದ ಮೋನು, ಅನೀಸ, ಸಫಿಯಾ, ನೆಬಿಸಾ ಹಾಗೂ ಇತರರ ಜೊತೆ ಸೇರಿ ಪೊಲೀಸರಿಂದ ವಾರಂಟ್ ಪ್ರತಿ ಕಿತ್ತು ಅವಾಚ್ಯ ಶಬ್ದಗಳಿಂದ ಬೈದು ಕಚ್ಚಿ ಗಾಯಗೊಳಿಸಿದ ಬಗ್ಗೆ ವೇಣೂರು ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2022 ಕಲಂ 143, 147, 148, 504, 353, 332 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ವಾರಂಟ್ ಆರೋಪಿಯ ಬಂಧನ Rating: 5 Reviewed By: karavali Times
Scroll to Top