ದ.ಕ. ಜಿಲ್ಲೆಯ ಆತಂಕದ ವಾತಾವರಣಕ್ಕೆ ವಿಧಿಸಲಾಗಿದ್ದ ನಿರ್ಬಂಧ ಇನ್ನೆರಡು ದಿನ ವಿಸ್ತರಿಸಿ ಡೀಸಿ ಪರಿಷ್ಕøತ ಆದೇಶ - Karavali Times ದ.ಕ. ಜಿಲ್ಲೆಯ ಆತಂಕದ ವಾತಾವರಣಕ್ಕೆ ವಿಧಿಸಲಾಗಿದ್ದ ನಿರ್ಬಂಧ ಇನ್ನೆರಡು ದಿನ ವಿಸ್ತರಿಸಿ ಡೀಸಿ ಪರಿಷ್ಕøತ ಆದೇಶ - Karavali Times

728x90

31 July 2022

ದ.ಕ. ಜಿಲ್ಲೆಯ ಆತಂಕದ ವಾತಾವರಣಕ್ಕೆ ವಿಧಿಸಲಾಗಿದ್ದ ನಿರ್ಬಂಧ ಇನ್ನೆರಡು ದಿನ ವಿಸ್ತರಿಸಿ ಡೀಸಿ ಪರಿಷ್ಕøತ ಆದೇಶ

ಮಂಗಳೂರು, ಜುಲೈ 31, 2022 (ಕರಾವಳಿ ಟೈಮ್ಸ್) : ಜಿಲ್ಲೆಯಲ್ಲಿ ಉಂಟಾಗಿರುವ ಸರಣಿ ಕೊಲೆ ಹಾಗೂ ಆ ಬಳಿಕದ ಕೋಮು ಉದ್ವಿಗ್ನತೆಯ ಹಿನ್ನಲೆಯಲ್ಲಿ ಜುಲೈ 29 ರ ಸಂಜೆ 6 ಗಂಟೆಯಿಂದ ಆಗಸ್ಟ್ 1 ರ ಬೆಳಿಗ್ಗೆ 6 ಗಂಟೆವರೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಮತ್ತೆರಡು ದಿನ ವಿಸ್ತರಿಸಿರುವ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಪರಿಷೃತ ಆದೇಶ ಹೊರಡಿಸಿದ್ದಾರೆ. 

ಡೀಸಿ ಪರಿಷ್ಕøತ ಆದೇಶದಂತೆ ಆಗಸ್ಟ್ 3 ರ ಮುಂಜಾನೆ 6 ಗಂಟೆವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. ಈ ಹಿಂದಿನ ಆದೇಶದಂತೆ ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲೂ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅಂಗಡಿ ತೆರೆದು ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಸಂಜೆ 6 ಗಂಟೆಯ ಮುಂಚಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲು ಆದೇಶಿಸಲಾಗಿದೆ. ಅದೇ ರೀತಿ ಅನಾವಶ್ಯಕವಾಗಿ ಜನ ಹಾಗೂ ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿದೆ. ಆದರೆ, ತುರ್ತು ಸೇವೆಗಳು, ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಗಳಿಗೆ ಈ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ. ಅದೇ ರೀತಿ ಜಿಲ್ಲೆಯಾದ್ಯಂತ ಇನ್ನೆರಡು ದಿನಗಳ ಕಾಲ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆಯೂ ಡೀಸಿ ಆದೇಶಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲೆಯ ಆತಂಕದ ವಾತಾವರಣಕ್ಕೆ ವಿಧಿಸಲಾಗಿದ್ದ ನಿರ್ಬಂಧ ಇನ್ನೆರಡು ದಿನ ವಿಸ್ತರಿಸಿ ಡೀಸಿ ಪರಿಷ್ಕøತ ಆದೇಶ Rating: 5 Reviewed By: karavali Times
Scroll to Top