ಅಂತರ್ ಶಾಲಾ ಮಟ್ಟದ ಚೆಸ್ ಸ್ಪರ್ಧೆ : ಬಂಟ್ವಾಳ ರಘುರಾಮ ಮುಕುಂದ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನದೊಂದಿಗೆ ‘ಬೋರ್ಡ್ ಪ್ರಶಸ್ತಿ’ - Karavali Times ಅಂತರ್ ಶಾಲಾ ಮಟ್ಟದ ಚೆಸ್ ಸ್ಪರ್ಧೆ : ಬಂಟ್ವಾಳ ರಘುರಾಮ ಮುಕುಂದ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನದೊಂದಿಗೆ ‘ಬೋರ್ಡ್ ಪ್ರಶಸ್ತಿ’ - Karavali Times

728x90

1 September 2022

ಅಂತರ್ ಶಾಲಾ ಮಟ್ಟದ ಚೆಸ್ ಸ್ಪರ್ಧೆ : ಬಂಟ್ವಾಳ ರಘುರಾಮ ಮುಕುಂದ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನದೊಂದಿಗೆ ‘ಬೋರ್ಡ್ ಪ್ರಶಸ್ತಿ’

ಬಂಟ್ವಾಳ, ಸೆಪ್ಟೆಂಬರ್ 01, 2022 (ಕರಾವಳಿ ಟೈಮ್ಸ್) : ಬಂಟ್ವಾಳ-ವಿದ್ಯಾಗಿರಿ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಧ್ಯಾನ್ ಕೃಷ್ಣ ಶೆಟ್ಟಿ, ಅದ್ವಿತ್ ಎಸ್ ಶೆಟ್ಟಿ, ರಿಯಾನ ಸೋನಾಲಿ ಪಿಂಟೋ, ವೈಭವ್ ವಿ ಪೈ ಮತ್ತು 8ನೇ ತರಗತಿ ವಿದ್ಯಾರ್ಥಿ ದೀನ್ ರಾಮ್ ಶೆಟ್ಟಿ ಇವರನ್ನೊಳಗೊಂಡ ತಂಡವು ಉಡುಪಿ ಕನ್ನರ್ಪಾಡಿ ಸೈಂಟ್ ಮೇರಿಸ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‍ಇ ಮತ್ತು ಐಸಿಎಸ್‍ಸಿ ಶಾಲೆಗಳ ಒಕ್ಕೂಟವು ಆಯೋಜಿಸಿದ್ದ 17 ವರ್ಷದೊಳಗಿನ ವಯೋಮಿತಿಯ ಅಂತರ್ ಶಾಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಬೋರ್ಡ್ ಪ್ರಶಸ್ತಿ ಗಳಿಸಿರುತ್ತಾರೆ. 

ವಿಜೇತರಿಗೆ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೂಡಿಗೆ ಪಾಂಡುರಂಗ ಶೆಣೈ, ಉಪಾಧ್ಯಕ್ಷೆ ವತ್ಸಲ ಕಾಮತ್,  ಕಾರ್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ, ಅನಿರುದ್ಧ ಕಾಮತ್, ಎಸ್ ವಿ ಎಸ್ ಸಮೂಹ ಸಂಸ್ಥೆಗಳ ಸಂಚಾಲಕಿ ಕೆ ರೇಖಾ ಶೆಣೈ ಹಾಗೂ ಪ್ರಾಂಶುಪಾಲರು, ಬೋಧಕ-ಬೋಧಕೇತರ ವರ್ಗ ಅಭಿನಂದನೆ ಸಲ್ಲಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅಂತರ್ ಶಾಲಾ ಮಟ್ಟದ ಚೆಸ್ ಸ್ಪರ್ಧೆ : ಬಂಟ್ವಾಳ ರಘುರಾಮ ಮುಕುಂದ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನದೊಂದಿಗೆ ‘ಬೋರ್ಡ್ ಪ್ರಶಸ್ತಿ’ Rating: 5 Reviewed By: karavali Times
Scroll to Top