ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ ಪ್ರಕರಣದ ಆರೋಪಿ ಕಾರು ಸಹಿತ ವಶಕ್ಕೆ : ಓವರ್ ಟೇಕ್ ಸಂಬಂಧ ನಡೆದ ಘಟನೆ ಎಂದ ಪೊಲೀಸರು - Karavali Times ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ ಪ್ರಕರಣದ ಆರೋಪಿ ಕಾರು ಸಹಿತ ವಶಕ್ಕೆ : ಓವರ್ ಟೇಕ್ ಸಂಬಂಧ ನಡೆದ ಘಟನೆ ಎಂದ ಪೊಲೀಸರು - Karavali Times

728x90

14 October 2022

ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ ಪ್ರಕರಣದ ಆರೋಪಿ ಕಾರು ಸಹಿತ ವಶಕ್ಕೆ : ಓವರ್ ಟೇಕ್ ಸಂಬಂಧ ನಡೆದ ಘಟನೆ ಎಂದ ಪೊಲೀಸರು

 ಬಂಟ್ವಾಳ, ಅಕ್ಟೋಬರ್ 14, 2022 (ಕರಾವಳಿ ಟೈಮ್ಸ್) : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿಗೆ ಅಡ್ಡಗಟ್ಟಿ ಆಯುಧ ತೊರಿ ಬೆದರಿಕೆ ಒಡ್ಡಿದ್ದರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿತ ಮಂಗಳೂರು-ಫಳ್ನೀರು ನಿವಾಸಿ ರಿಯಾಝ್ ಅಬ್ದುಲ್ ಖಾದರ್ (38) ಎಂಬಾತನನ್ನು ಕೇರಳ ನೋಂದಣಿಯ ಸ್ಕಾರ್ಪಯೋ ಸಹಿತ ವಶಕ್ಕೆ ಪಡೆದಿದ್ದಾರೆ. ಘಟನೆಯ ಹಿನ್ನಲೆಯಲ್ಲಿ ಠಾಣೆಗೆ ದೂರು ನೀಡಿದ ಶಾಸಕರ ಕಾರು ಚಾಲಕ ಆರೋಪಿ ಹಾಗೂ ಸ್ಕಾರ್ಪಿಯೋ ಕಾರನ್ನು ಗುರುತಿಸಿದ್ದಾರೆ. 

ಪೊಲೀಸರು ವಶಕ್ಕೆ ಪಡೆದುಕೊಂಡಿರುವ ರಿಯಾಝ್ ವಿರುದ್ದ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಹಾಗೂ ಆತನಲ್ಲಿ ಯಾವುದೇ ಆಯುಧ ಪತ್ತೆಯಾಗಿಲ್ಲ. ಘಟನೆ ವಾಹನವನ್ನು ಓವರ್ ಟೇಕ್ ಮಾಡುವ ವಿಷಯಕ್ಕೆ ಸಂಬಂಧಿಸಿ ನಡೆದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಶಾಸಕ ಹರೀಶ್ ಪೂಂಜಾ ಕಾರು ಅಡ್ಡಗಟ್ಟಿ ಬೆದರಿಕೆ ಪ್ರಕರಣದ ಆರೋಪಿ ಕಾರು ಸಹಿತ ವಶಕ್ಕೆ : ಓವರ್ ಟೇಕ್ ಸಂಬಂಧ ನಡೆದ ಘಟನೆ ಎಂದ ಪೊಲೀಸರು Rating: 5 Reviewed By: karavali Times
Scroll to Top