ಪುತ್ತೂರು : ಶ್ರೀರಾಮ್ ಫೈನಾನ್ಸ್ ವತಿಯಿಂದ 297 ವಿದ್ಯಾರ್ಥಿಗಳಿಗೆ 9.45 ಲಕ್ಷ ರೂ. ವಿದ್ಯಾರ್ಥಿ ನಿಧಿ ವಿತರಣೆ - Karavali Times ಪುತ್ತೂರು : ಶ್ರೀರಾಮ್ ಫೈನಾನ್ಸ್ ವತಿಯಿಂದ 297 ವಿದ್ಯಾರ್ಥಿಗಳಿಗೆ 9.45 ಲಕ್ಷ ರೂ. ವಿದ್ಯಾರ್ಥಿ ನಿಧಿ ವಿತರಣೆ - Karavali Times

728x90

13 January 2023

ಪುತ್ತೂರು : ಶ್ರೀರಾಮ್ ಫೈನಾನ್ಸ್ ವತಿಯಿಂದ 297 ವಿದ್ಯಾರ್ಥಿಗಳಿಗೆ 9.45 ಲಕ್ಷ ರೂ. ವಿದ್ಯಾರ್ಥಿ ನಿಧಿ ವಿತರಣೆ

ಪುತ್ತೂರು, ಜನವರಿ 14, 2023 (ಕರಾವಳಿ ಟೈಮ್ಸ್) : ಶ್ರೀರಾಮ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಇದರ ಪುತ್ತೂರು ಶಾಖಾ ವತಿಯಿಂದ ಪುತ್ತೂರು ತಾಲೂಕಿನ 297 ವಿದ್ಯಾರ್ಥಿಗಳಿಗೆ 9.45 ಲಕ್ಷ ರೂ. ವಿದ್ಯಾರ್ಥಿ ನಿಧಿ ವಿತರಣೆ ಇಲ್ಲಿನ ಟೌನ್ ಬ್ಯಾಂಕ್ ಹಾಲ್ ನಲ್ಲಿ ಶುಕ್ರವಾರ (ಜ 13) ನಡೆಯಿತು.

ಕಂಪೆನಿಯ ಸಂಸ್ಥೆಯ ಝೋನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ಶಾಸಕ ಸಂಜೀವ ಮಠಂದೂರು ವಿದ್ಯಾರ್ಥಿ ನಿಧಿ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ನಗರಸಭಾಧ್ಯಕ್ಷ ಜೀವಂಧರ ಜೈನ್, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಶಿಕ್ಷ-ರಕ್ಷಕ ಸಂಘದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ ವಿ, ಸಂಸ್ಥೆಯ ಝೋನಲ್ ರಿಕವರಿ ಹೆಡ್ ನಾಗರಾಜ ಬಿ, ಸ್ಟೇಟ್ ಹೆಡ್ ಸದಾಶಿವ, ಆರ್ ಬಿ ಎಚ್ ಮಹೇಶ್ ಕುಮಾರ್ ಸಿ ಎಚ್ ಮೊದಲಾದವರು ಭಾಗವಹಿಸಿದ್ದರು. 


ಕಾರ್ಯಕ್ರಮದಲ್ಲಿ 108 ಮಂದಿ ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 3,500/- ರಂತೆ 3.78 ಲಕ್ಷ ರೂಪಾಯಿ ಹಾಗೂ 189 ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂಪಾಯಿಯಂತೆ 5.67 ಲಕ್ಷ ರೂಪಾಯಿ ಸೇರಿ ಒಟ್ಟು 297 ಮಂದಿ ವಿದ್ಯಾರ್ಥಿಗಳಿಗೆ 9.45 ಲಕ್ಷ ರೂಪಾಯಿ ವಿದ್ಯಾರ್ಥಿ ನಿಧಿ ವಿತರಿಸಲಾಯಿತು. 

ಸಂಸ್ಥೆಯ ರೀಜನಲ್ ಬ್ಯುಸಿನೆಸ್ ಹೆಡ್ ಚೇತನ್ ಅರಸ್ ಸ್ವಾಗತಿಸಿ, ಪುತ್ತೂರು ಶಾಖಾಧಿಕಾರಿ ಜಯಪ್ರಕಾಶ್ ರೈ ವಂದಿಸಿದರು. ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : ಶ್ರೀರಾಮ್ ಫೈನಾನ್ಸ್ ವತಿಯಿಂದ 297 ವಿದ್ಯಾರ್ಥಿಗಳಿಗೆ 9.45 ಲಕ್ಷ ರೂ. ವಿದ್ಯಾರ್ಥಿ ನಿಧಿ ವಿತರಣೆ Rating: 5 Reviewed By: karavali Times
Scroll to Top