ಸುರತ್ಕಲ್ : ಶ್ರೀರಾಮ್ ಫೈನಾನ್ಸ್ ಪ್ರಾಯೋಜತ್ವದಲ್ಲಿ 6.10 ಲಕ್ಷ ರೂಪಾಯಿ ವಿದ್ಯಾರ್ಥಿ ನಿಧಿ ವಿತರಣೆ - Karavali Times ಸುರತ್ಕಲ್ : ಶ್ರೀರಾಮ್ ಫೈನಾನ್ಸ್ ಪ್ರಾಯೋಜತ್ವದಲ್ಲಿ 6.10 ಲಕ್ಷ ರೂಪಾಯಿ ವಿದ್ಯಾರ್ಥಿ ನಿಧಿ ವಿತರಣೆ - Karavali Times

728x90

25 January 2023

ಸುರತ್ಕಲ್ : ಶ್ರೀರಾಮ್ ಫೈನಾನ್ಸ್ ಪ್ರಾಯೋಜತ್ವದಲ್ಲಿ 6.10 ಲಕ್ಷ ರೂಪಾಯಿ ವಿದ್ಯಾರ್ಥಿ ನಿಧಿ ವಿತರಣೆ

ಮಂಗಳೂರು, ಜನವರಿ 25, 2023 (ಕರಾವಳಿ ಟೈಮ್ಸ್) : ಶ್ರೀರಾಮ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಇದರ ಮಂಗಳೂರು ಪ್ರಾದೇಶಿಕ ವಿಭಾಗದ ವತಿಯಿಂದ ವ್ಯಾಪ್ತಿಯ ಆಯ್ದ ಅರ್ಹ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಮಂಗಳವಾರ (ಜನವರಿ 24) ರಂದು ಸುರತ್ಕಲ್-ಹೊಸಬೆಟ್ಟುವಿನ ಶ್ರೀರಾಮ್ ಅಟೋ ಮಾಲ್ ಯಾರ್ಡ್‍ನಲ್ಲಿ ನಡೆಯಿತು. 


ಕಂಪೆನಿಯ ಸಂಸ್ಥೆಯ ಝೋನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಕಾರ್ಯಕ್ರಮ ಉದ್ಘಾಟಿಸಿದರು. ಮಾತಾ ಡೆವಲಪರ್ಸ್ ಪ್ರೈ ಲಿ ಇದರ ಎಂ ಡಿ ಸಂತೋಷ್ ಕುಮಾರ್ ಶೆಟ್ಟಿ ವಿದ್ಯಾರ್ಥಿ ನಿಧಿ ವಿತರಿಸಿದರು. 


ಮುಖ್ಯ ಅತಿಥಿಗಳಾಗಿ ಶ್ರೀರಾಮ್ ಅಟೋ ಮಾಲ್ ಝಡ್ ಬಿ ಎಚ್ ಗಣೇಶ್ ಭಟ್,  ಉದ್ಯಮಿ ಅಶ್ವಿನ್ ಬಿ ಆಳ್ವ ಕಿನ್ನಿಗೋಳಿ, ಶ್ರೀ ಕಟೀಲ್ ಲಾಜಿಸ್ಟಿಕ್ ಮಾಲಕ ಜನಾರ್ದನ ಪೂಜಾರಿ ಭಾಗವಹಿಸಿದ್ದರು. 

ಸಂಸ್ಥೆಯ ಝೋನಲ್ ರಿಕವರಿ ಹೆಡ್ ನಾಗರಾಜ ಬಿ, ಸ್ಟೇಟ್ ಹೆಡ್ ಸದಾಶಿವ, ಶ್ರೀರಾಮ್ ಅಟೋ ಮಾಲ್ ಸ್ಟೇಟ್ ಹೆಡ್ ಪ್ರಶಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ರೀಜನಲ್ ಬಿಝಿನೆಸ್ ಹೆಡ್ ಚೇತನ್ ಅರಸ್ ಸ್ವಾಗತಿಸಿದರು. ಶ್ರೀರಾಮ್ ಅಟೋ ಮಾಲ್ ಮ್ಯಾನೇಜರ್ ಆಸ್ಟಿನ್ ಡಿ’ಸೋಜ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.  

ಇದೇ ವೇಳೆ 63 ಮಂದಿ ಪಿಯುಸಿ ಹಾಗೂ 124 ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳ ಸಹಿತ ಒಟ್ಟು 193 ಮಂದಿ ವಿದ್ಯಾರ್ಥಿಗಳಿಗೆ 6 ಲಕ್ಷದ 10 ಸಾವಿರದ ಐನೂರು ರೂಪಾಯಿ ವಿದ್ಯಾರ್ಥಿ ನಿಧಿ ವಿತರಿಸಲಾಯಿತು. 

ಸಂಸ್ಥೆಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒಟ್ಟು 1,940 ಮಂದಿ ವಿದ್ಯಾರ್ಥಿಗಳಿಗೆ 61 ಲಕ್ಷದ 62 ಸಾವಿರದ ಐನೂರು ರೂಪಾಯಿ ವಿದ್ಯಾರ್ಥಿ ನಿಧಿ ವಿತರಿಸಲಾಯಿತು.

  • Blogger Comments
  • Facebook Comments

0 comments:

Post a Comment

Item Reviewed: ಸುರತ್ಕಲ್ : ಶ್ರೀರಾಮ್ ಫೈನಾನ್ಸ್ ಪ್ರಾಯೋಜತ್ವದಲ್ಲಿ 6.10 ಲಕ್ಷ ರೂಪಾಯಿ ವಿದ್ಯಾರ್ಥಿ ನಿಧಿ ವಿತರಣೆ Rating: 5 Reviewed By: karavali Times
Scroll to Top