ಮಾಜಿ ಸಿಎಂ ಸಿದ್ದು ಆಗಮನ ಹಿನ್ನಲೆ : ಬೋಳಿಯಾರಿನಲ್ಲಿ ವಲಯ ಕಾಂಗ್ರೆಸ್ ಸಮಿತಿಯಿಂದ ಪೂರ್ವಭಾವಿ ಸಭೆ - Karavali Times ಮಾಜಿ ಸಿಎಂ ಸಿದ್ದು ಆಗಮನ ಹಿನ್ನಲೆ : ಬೋಳಿಯಾರಿನಲ್ಲಿ ವಲಯ ಕಾಂಗ್ರೆಸ್ ಸಮಿತಿಯಿಂದ ಪೂರ್ವಭಾವಿ ಸಭೆ - Karavali Times

728x90

3 January 2023

ಮಾಜಿ ಸಿಎಂ ಸಿದ್ದು ಆಗಮನ ಹಿನ್ನಲೆ : ಬೋಳಿಯಾರಿನಲ್ಲಿ ವಲಯ ಕಾಂಗ್ರೆಸ್ ಸಮಿತಿಯಿಂದ ಪೂರ್ವಭಾವಿ ಸಭೆ

ಮಂಗಳೂರು, ಜನವರಿ 04, 2023 (ಕರಾವಳಿ ಟೈಮ್ಸ್) : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಡಿ 5) ಮಂಗಳೂರು ವಿಧಾನಸಭಾ ಕ್ಷೇತ್ರದ ಹರೇಕಳಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೋಳಿಯಾರು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಗ್ರಾಮದ ಜೋನ್ ಕಾಂಪ್ಲೆಕ್ಸ್‍ನಲ್ಲಿ ಮಂಗಳವಾರ ಸಂಜೆ ಪೂರ್ವ ಭಾವಿ ಸಭೆ ನಡೆಯಿತು.  


ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾಂಗ್ರೆಸ್ ವೀಕ್ಷಕ ಅಬ್ದುಲ್ ರಹಿಮಾನ್ ಕೊಡಿಜಾಲ್ ಮಾತನಾಡಿ, ಸಿದ್ಧರಾಮಯ್ಯ ಅವರು ಜನಪರ ನಾಯಕರಾಗಿದ್ದು ಅವರ ಭೇಟಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರೆ ನೀಡಿದರು.


ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಚ್ಯುತ ಗಟ್ಟಿ ಅವರು ಸಿದ್ದರಾಮಯ್ಯ ಅವರ ಭೇಟಿ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ವಲಯ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬೋಳಿಯಾರು, ಬೋಳಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜೆಸಿಂತಾ ಪಿಂಟೋ, ತಾ ಪಂ ಮಾಜಿ ಸದಸ್ಯ ಬಿ ಕೆ ಅಬ್ದುಲ್ ಜಬ್ಬಾರ್, ಬೋಳಿಯಾರ್ ಯುವ ಕಾಂಗ್ರೆಸ್ ಅಧ್ಯಕ್ಷ ಶಮೀರ್ ಓ ಕೆ, ಕಾಂಗ್ರೆಸ್ ಮುಖಂಡ ಮುನೀರ್ ಬಂಡಸಾಲೆ ಸಭೆಯಲ್ಲಿ ಭಾಗವಹಿಸಿದ್ದರು. ಬೋಳಿಯಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಶುಕೂರ್ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಮಾಜಿ ಸಿಎಂ ಸಿದ್ದು ಆಗಮನ ಹಿನ್ನಲೆ : ಬೋಳಿಯಾರಿನಲ್ಲಿ ವಲಯ ಕಾಂಗ್ರೆಸ್ ಸಮಿತಿಯಿಂದ ಪೂರ್ವಭಾವಿ ಸಭೆ Rating: 5 Reviewed By: karavali Times
Scroll to Top