ರಾಯಿ : ಸ್ಕೂಟರಿಗೆ ಹಿಂದಿನಿಂದ ಇನ್ನೋವಾ ಕಾರು ಗುದ್ದಿ ಸಹಸವಾರ ದಾರುಣ ಸಾವು - Karavali Times ರಾಯಿ : ಸ್ಕೂಟರಿಗೆ ಹಿಂದಿನಿಂದ ಇನ್ನೋವಾ ಕಾರು ಗುದ್ದಿ ಸಹಸವಾರ ದಾರುಣ ಸಾವು - Karavali Times

728x90

13 March 2023

ರಾಯಿ : ಸ್ಕೂಟರಿಗೆ ಹಿಂದಿನಿಂದ ಇನ್ನೋವಾ ಕಾರು ಗುದ್ದಿ ಸಹಸವಾರ ದಾರುಣ ಸಾವು

ಬಂಟ್ವಾಳ, ಮಾರ್ಚ್ 13, 2023 (ಕರಾವಳಿ ಟೈಮ್ಸ್) : ತಾಲೂಕಿನ ರಾಯಿ ಎಂಬಲ್ಲಿ ದ್ವಿಚಕ್ರ ವಾಹನದ ಹಿಂಬದಿಗೆ ಇನ್ನೋವಾರ ಕಾರು ಡಿಕ್ಕಿ ಹೊಡೆದ ಪರಿಣಾಮ ಸಹಸವಾರ, ಬಂಟ್ವಾಳ-ಬೈಪಾಸ್ ನಿವಾಸಿ ಚಂದ್ರಶೇಖರ ಬಿ (50) ಅವರು ಮೃತಪಟ್ಟಿದ್ದು, ಸವಾರ ಯೋಗೀಶ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಈ ಬಗ್ಗೆ ಪುರುಷೋತ್ತಮ ಬಿ ಅವರು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾ 12 ರಂದು ಸಿದ್ದಕಟ್ಟೆಯಲ್ಲಿ ದೈವದ ಕಾರ್ಯಕ್ರಮ ಮುಗಿಸಿ ವಾಪಾಸು ಬಂಟ್ವಾಳ ಕಡೆಗೆ ಮೋಟಾರ್ ಸೈಕಲಿನಲ್ಲಿ ಬರುತ್ತಿದ್ದ ವೇಳೆ ಬಂಟ್ವಾಳ ತಾಲೂಕು ರಾಯಿ ಗ್ರಾಮದ ರಾಯಿ ಎಂಬಲ್ಲಿಗೆ ತಲುಪುತ್ತಿದ್ದಂತೆ ಹಿಂದಿನಿಂದ ಬರುತ್ತಿದ್ದ ಇನ್ನೋವಾ ಕಾರು ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ನನ್ನ ಮೋಟಾರ್ ಸೈಕಲನ್ನು ಓವರ್ ಟೇಕ್ ಮಾಡಿಕೊಂಡು ಹೋಗಿ ಎದುರಿನಿಂದ ಹೋಗುತ್ತಿದ್ದ ಚಂದ್ರಶೇಖರ್ ಅವರು ಸಹ ಸವಾರನಾಗಿ ಯೋಗೀಶ್ ಅವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ  ಹಾಗೂ ಸಹ ಸವಾರ ಸ್ಕೂಟರ್ ಇಬ್ಬರೂ ರಸ್ತೆಗೆಸೆಯಲ್ಪಟ್ಟಿದ್ದು, ಈ ಪೈಕಿ ಸಹ ಸವಾರ ಚಂದ್ರಶೇಖರ್ ಬಿ ಅವರ ಎರಡೂ ಕಾಲುಗಳಿಗೆ ಹಾಗೂ ಹೊಟ್ಟೆಯ ಭಾಗಕ್ಕೆ  ಗುದ್ದಿದ  ಗಾಯವಾಗಿದ್ದು ಮೋಟಾರ್ ಸೈಕಲ್ ಸವಾರ ಯೋಗೀಶ್ ಅವರ ಮುಖಕ್ಕೆ ಕೈಗಳಿಗೆ ಹಾಗೂ ತಲೆಗೆ ಗಾಯಗಳಾಗಿದ್ದು ಚಿಕಿತ್ಸೆಯ ಬಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಚಂದ್ರಶೇಖರ ಅವರು  ಅವರು ಸೋಮವಾರ ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾರೆ. ಸವಾರ ಯೋಗೀಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ. 

ಅಪಘಾತಕ್ಕೆ ಕಾರಣವಾದ ಇನ್ನೋವಾ ಕಾರು ಚಾಲಕ ದಿವಾಕರ ಆಚಾರ್ಯ ವಿರುದ್ದ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ರಾಯಿ : ಸ್ಕೂಟರಿಗೆ ಹಿಂದಿನಿಂದ ಇನ್ನೋವಾ ಕಾರು ಗುದ್ದಿ ಸಹಸವಾರ ದಾರುಣ ಸಾವು Rating: 5 Reviewed By: karavali Times
Scroll to Top