ಸಿದ್ದು ಸರಕಾರಕ್ಕೆ ಸವಾಲಾಗುತ್ತಿರುವ ಮೋರಲ್ ಪೊಲೀಸಿಂಗ್ : ಸೋಮೇಶ್ವರ ಬೀಚ್ ನೈತಿಕ ಪೊಲೀಸ್ ಗಿರಿ 3ನೇ ಘಟನೆ, ಸಿಎಂ, ಡಿಸಿಎಂ, ಸಚಿವ-ಶಾಸಕರುಗಳ ಖಡಕ್ ವಾರ್ನಿಂಗ್ ಕಾರ್ಯರೂಪಕ್ಕೆ ಬರಲಿದೆಯೇ? ಗ್ಯಾರಂಟಿ ಯೋಜನೆ ಜಾರಿಗೂ ಮುನ್ನ ನೆಮ್ಮದಿಗೆ ಗ್ಯಾರಂಟಿ ನೀಡುವ ಕೆಲಸ ಸರಕಾರ ಮಾಡಲಿ : ಜನರ ಆಗ್ರಹ - Karavali Times ಸಿದ್ದು ಸರಕಾರಕ್ಕೆ ಸವಾಲಾಗುತ್ತಿರುವ ಮೋರಲ್ ಪೊಲೀಸಿಂಗ್ : ಸೋಮೇಶ್ವರ ಬೀಚ್ ನೈತಿಕ ಪೊಲೀಸ್ ಗಿರಿ 3ನೇ ಘಟನೆ, ಸಿಎಂ, ಡಿಸಿಎಂ, ಸಚಿವ-ಶಾಸಕರುಗಳ ಖಡಕ್ ವಾರ್ನಿಂಗ್ ಕಾರ್ಯರೂಪಕ್ಕೆ ಬರಲಿದೆಯೇ? ಗ್ಯಾರಂಟಿ ಯೋಜನೆ ಜಾರಿಗೂ ಮುನ್ನ ನೆಮ್ಮದಿಗೆ ಗ್ಯಾರಂಟಿ ನೀಡುವ ಕೆಲಸ ಸರಕಾರ ಮಾಡಲಿ : ಜನರ ಆಗ್ರಹ - Karavali Times

728x90

1 June 2023

ಸಿದ್ದು ಸರಕಾರಕ್ಕೆ ಸವಾಲಾಗುತ್ತಿರುವ ಮೋರಲ್ ಪೊಲೀಸಿಂಗ್ : ಸೋಮೇಶ್ವರ ಬೀಚ್ ನೈತಿಕ ಪೊಲೀಸ್ ಗಿರಿ 3ನೇ ಘಟನೆ, ಸಿಎಂ, ಡಿಸಿಎಂ, ಸಚಿವ-ಶಾಸಕರುಗಳ ಖಡಕ್ ವಾರ್ನಿಂಗ್ ಕಾರ್ಯರೂಪಕ್ಕೆ ಬರಲಿದೆಯೇ? ಗ್ಯಾರಂಟಿ ಯೋಜನೆ ಜಾರಿಗೂ ಮುನ್ನ ನೆಮ್ಮದಿಗೆ ಗ್ಯಾರಂಟಿ ನೀಡುವ ಕೆಲಸ ಸರಕಾರ ಮಾಡಲಿ : ಜನರ ಆಗ್ರಹ

ಮಂಗಳೂರು, ಜೂನ್ 02, 2023 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಎಷ್ಟೇ ಬಲಿಷ್ಠವಾಗಿದ್ದರೂ ಬಾಬಾ ಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನದ ಪವರ್ ತೋರಿಸಿಯೇ ಸಿದ್ದ ಎಂದು ನೂತನವಾಗಿ ಅಧಿಕಾರ ಗದ್ದುಗೆಗೆ ಏರಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆರಂಭದಲ್ಲಿಯೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವರುಗಳು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೈತಿಕ ಪೊಲೀಸ್ ಗಿರಿ ಸೇರಿದಂತೆ ಕಾನೂನು ಕೈಗೆತ್ತಿಕೊಳ್ಳುವ ಶಕ್ತಿಗಳ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಖಡಕ್ ವಾರ್ನಿಂಗ್ ಕೂಡಾ ನೀಡಿದ್ದರು. ಬಳಿಕ ಗೃಹ ಸಚಿವ ಡಾ ಪರಮೇಶ್ವರ, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಮಂದಿ ಸಚಿವ-ಶಾಸಕರುಗಳು ನಿತ್ಯ ಖಡಕ್ ವಾರ್ನಿಂಗ್-ಹೇಳಿಕೆಗಳನ್ನು ನೀಡುತ್ತಿರುವ ಮಧ್ಯೆ ಸಿದ್ದು ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೂರನೇ ನೈತಿಕ ಪೊಲೀಸ್ ಗಿರಿ ಪ್ರಕರಣ ಕರ್ನಾಟಕದಲ್ಲಿ ನಡೆದಿದೆ. ಯಾವುದೇ ಖಡಕ್ ವಾರ್ನಿಂಗ್ ಆಗಲೀ, ಕಠಿಣ ಕ್ರಮ ಆಗಲೀ, ನಿಷೇಧದ ತೂಗುಕತ್ತಿಯಾಗಲೀ ಯಾವುದೇ ಕಂಡು ಬರುತ್ತಿಲ್ಲ. ಜನ ಸರಕಾರದ ಗ್ಯಾರಂಟಿಗಿಂತ ಮುಂಚಿತವಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಹುಳಿ ಹಿಂಡುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಮೂಲಕ ಜನರ ನೆಮ್ಮದಿಯ ಗ್ಯಾರಂಟಿಯನ್ನು ನೀಡುವಂತೆ ಸರಕಾರಕ್ಕೆ ವಾರ್ನಿಂಗ್ ನೀಡುತ್ತಿದ್ದಾರೆ. 

ಚಿಕ್ಕಬಳ್ಳಾಪುರ ನಗರದ ಗೋಪಿಕಾ ಚಾಟ್ಸ್ ಬಳಿ ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಹೋಟೆಲಿಗೆ ಹೋಗಿದಕ್ಕೆ ಮುಸ್ಲಿಂ ಯುವಕರ ಗುಂಪು ನಡೆಸಿದ ನೈತಿಕ ಪೊಲೀಸ್ ಗಿರಿ, ಬಳಿಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೊಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ನೈತಿಕ ಪೆÇಲೀಸ್ ಗಿರಿ, ಇದೀಗ ಕರ್ನಾಟಕದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ವರದಿಯಾಗಿದೆ. ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ಸಮೀಪದ ಸೋಮೇಶ್ವರ ಬೀಚಿನಲ್ಲಿ ಗುರುವಾರ (ಜೂನ್ 1) ವಿಹಾರಕ್ಕೆಂದು ಬಂದಿದ್ದ ಕೇರಳ ಮೂಲದ 6 ಮಂದಿ ವೈದ್ಯಕೀಯ ಕೋರ್ಸ್ ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳು ನೈತಿಕ ಪೊಲೀಸ್ ಗಿರಿ ನಡೆಸಿದ್ದು, ವಿದ್ಯಾರ್ಥಿಗಳ ಹಲ್ಲೆ ನಡೆಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಮೋರಲ್ ಪೊಲೀಸಿಂಗ್ ಬಗ್ಗೆ ಇದೀಗ ಜನಾಕ್ರೋಶ ವ್ಯಕ್ತವಾಗುತ್ತಿದೆ. 

ದೇರಳಕಟ್ಟೆ ಸಮೀಪದ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ಹಿಂದೂ ವಿದ್ಯಾರ್ಥಿನಿಯರು ಹಾಗೂ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಈ ನೈತಿಕ ಪೊಲೀಸ್ ದಾಳಿ ನಡೆದಿದೆ. ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಕೇರಳದ ಕಣ್ಣೂರಿನ ಯುವಕರು ಹಾಗೂ ಕಾಸರಗೋಡಿನ ಯುವತಿಯರು ಸೋಮೇಶ್ವರ ಬೀಚಿಗೆ ವಿಹಾರಕ್ಕೆ ಬಂದಿದ್ದರು. ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದಕ್ಕೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಗಾಯಾಳು ವಿದ್ಯಾರ್ಥಿಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ವಿದ್ಯಾರ್ಥಿನಿಯರು ವಾಪಸ್ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ. 

ಘಟನೆ ಬಗ್ಗೆ ಉಳ್ಳಾಲ ಪೊಲೀಸರು ತನಿಖೆ ಕೈಗೊಂಡಿದ್ದಾರಾದರೂ ಯಾವುದೇ ಮಹತ್ವದ ಬೆಳವಣಿಗೆ ನಡೆದಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕ ಆಕ್ರೋಶ ಹೆಚ್ಚಾಗಿದೆ. ರಾಜ್ಯ ವಿಧಾನಸಭಾ ಸ್ಪೀಕರ್ ಹುದ್ದೆ ಸ್ವೀಕರಿಸಿ ಸದ್ಯ ಸರಣಿ ಸನ್ಮಾನ-ಅಭಿನಂದನೆಗಳನ್ನು ಸ್ವೀಕರಿಸುವ ಗೌಜಿ-ಗಮ್ಮತ್ತಿನಲ್ಲಿರುವ ಯು ಟಿ ಖಾದರ್ ಅವರ ಸ್ವಕ್ಷೇತ್ರದಲ್ಲಿ ಗುರುವಾರ ಈ ನೈತಿಕ ಪೊಲೀಸ್ ಗಿರಿ ನಡೆದಿದ್ದು, ಸರಕಾರ ನೆತ್ತಿ ಮೇಲೆ ಪ್ರಹಾರ ನಡೆಸಿದಂತಾಗಿದೆ ಎನ್ನುವ ಜನ ಕಾನೂನು ಮೀರಿ ನಡೆಯುವ ಮಂದಿಗೆ ಕ್ಷಮೆಯೇ ಇಲ್ಲ ಎಂದು ಸಾರಿ ಹೇಳುತ್ತಿರುವ ಸಿಎಂ, ಡಿಸಿಎಂ, ಸಚಿವರುಗಳ ಖಡಕ್ ವಾರ್ನಿಂಗ್ ಗಳು ಇದೀಗ ನಡೆಯುತ್ತಿರುವ ಸರಣಿ ಘಟನೆಗಳ ಬಗ್ಗೆ ಯಾವ ರೀತಿ ಫಲ ನೀಡಲಿದೆ ಎಂದು ಕಾಯುತ್ತಿದ್ದೇವೆ ಎನ್ನುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಿದ್ದು ಸರಕಾರಕ್ಕೆ ಸವಾಲಾಗುತ್ತಿರುವ ಮೋರಲ್ ಪೊಲೀಸಿಂಗ್ : ಸೋಮೇಶ್ವರ ಬೀಚ್ ನೈತಿಕ ಪೊಲೀಸ್ ಗಿರಿ 3ನೇ ಘಟನೆ, ಸಿಎಂ, ಡಿಸಿಎಂ, ಸಚಿವ-ಶಾಸಕರುಗಳ ಖಡಕ್ ವಾರ್ನಿಂಗ್ ಕಾರ್ಯರೂಪಕ್ಕೆ ಬರಲಿದೆಯೇ? ಗ್ಯಾರಂಟಿ ಯೋಜನೆ ಜಾರಿಗೂ ಮುನ್ನ ನೆಮ್ಮದಿಗೆ ಗ್ಯಾರಂಟಿ ನೀಡುವ ಕೆಲಸ ಸರಕಾರ ಮಾಡಲಿ : ಜನರ ಆಗ್ರಹ Rating: 5 Reviewed By: karavali Times
Scroll to Top