ಪಾಣೆಮಂಗಳೂರು : ಎಸ್.ವಿ.ಎಸ್. ಶಾಲಾ ನಿವೃತ್ತ ಶಿಕ್ಷಕ ಶಂಕರ್ ಮಾಸ್ಟರ್ ಇನ್ನಿಲ್ಲ - Karavali Times ಪಾಣೆಮಂಗಳೂರು : ಎಸ್.ವಿ.ಎಸ್. ಶಾಲಾ ನಿವೃತ್ತ ಶಿಕ್ಷಕ ಶಂಕರ್ ಮಾಸ್ಟರ್ ಇನ್ನಿಲ್ಲ - Karavali Times

728x90

18 November 2023

ಪಾಣೆಮಂಗಳೂರು : ಎಸ್.ವಿ.ಎಸ್. ಶಾಲಾ ನಿವೃತ್ತ ಶಿಕ್ಷಕ ಶಂಕರ್ ಮಾಸ್ಟರ್ ಇನ್ನಿಲ್ಲ

ಬಂಟ್ವಾಳ, ನವೆಂಬರ್ 18, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಎಸ್ ವಿ ಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಶಿಕ್ಷಕ ಬಿ ಶಂಕರ ರಾವ್ ಯಾನೆ ಶಂಕರ ಮಾಸ್ಟರ್ (91) ಅವರು ವಯೋಸಹಜ ಅನಾರೋಗ್ಯದಿಂದ ಶನಿವಾರ (ನ 18) ನರಿಕೊಂಬು ಗ್ರಾಮದ ಪುತ್ರೋಟಿಬೈಲಿನ ಸ್ವಗೃಹದಲ್ಲಿ ನಿಧನರಾದರು. 

ಎಸ್ ವಿ ಎಸ್ ಶಾಲೆಯಲ್ಲಿ ಸುಮಾರು 3 ದಶಕಗಳಿಗೂ ಅಧಿಕ ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಇವರು 1991-92ನೇ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗಿದ್ದರು. ಗಣಿತ, ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ಬೋಧನೆ ಮಾಡುತ್ತಿದ್ದ ಇವರು ಆರಂಭದ ವರ್ಷಗಳಲ್ಲಿ ಕಾಸರಗೋಡು-ಮೀಯಪದವು ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ಎಸ್.ವಿ.ಎಸ್. ಶಾಲಾ ನಿವೃತ್ತ ಶಿಕ್ಷಕ ಶಂಕರ್ ಮಾಸ್ಟರ್ ಇನ್ನಿಲ್ಲ Rating: 5 Reviewed By: karavali Times
Scroll to Top