ಲೋಕಸಭಾ ಚುನಾವಣೆ ಹಿನ್ನಲೆ : ಜಿಲ್ಲಾ ಎಸ್ಪಿಯಿಂದ ವಿವಿಧ ಚೆಕ್ ಪೋಸ್ಟ್, ಹೊರ ಠಾಣೆಗಳ ಪರಿಶೀಲನೆ - Karavali Times ಲೋಕಸಭಾ ಚುನಾವಣೆ ಹಿನ್ನಲೆ : ಜಿಲ್ಲಾ ಎಸ್ಪಿಯಿಂದ ವಿವಿಧ ಚೆಕ್ ಪೋಸ್ಟ್, ಹೊರ ಠಾಣೆಗಳ ಪರಿಶೀಲನೆ - Karavali Times

728x90

19 March 2024

ಲೋಕಸಭಾ ಚುನಾವಣೆ ಹಿನ್ನಲೆ : ಜಿಲ್ಲಾ ಎಸ್ಪಿಯಿಂದ ವಿವಿಧ ಚೆಕ್ ಪೋಸ್ಟ್, ಹೊರ ಠಾಣೆಗಳ ಪರಿಶೀಲನೆ

ಮಂಗಳೂರು, ಮಾರ್ಚ್ 20, 2024 (ಕರಾವಳಿ ಟೈಮ್ಸ್) : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ  ಜಿಲ್ಲಾ ಎಸ್ಪಿ ಸಿ ಬಿ ರಿಷ್ಯಂತ್ ಅವರು ಜಿಲ್ಲಾ ವ್ಯಾಪ್ತಿಯ ಸಾರಡ್ಕ, ಪಾಣಾಜೆ, ಮೇನಾಲ, ಮೂರೂರು, ಕಲ್ಲುಗುಂಡಿ, ಗುಂಡ್ಯ ಎಂಬಲ್ಲಿ ಕಾರ್ಯಾಚರಿಸುತ್ತಿರುವ ಚೆಕ್ ಪೊಸ್ಟ್ ಗಳನ್ನು ಪರಿಶೀಲಿಸಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆ ಸೂಚಿಸಿದರು. 

ಈ ನಡುವೆ ನೆಲ್ಯಾಡಿ ಹೊರ ಠಾಣೆಗೆ ಭೇಟಿ ನೀಡಿ, ಹೊರ ಠಾಣಾ ನಿರ್ವಹಣೆ, ಠಾಣಾ ಪರಿಸರದ ಶುಚಿತ್ವ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿದರು. ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗಾಗಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಭೇಟಿ ನೀಡಿ, ಕಾಮಗಾರಿಯ ಪ್ರಗತಿಯ ಬಗ್ಗೆ ಪರಿಶೀಲಿಸಿದರು.



  • Blogger Comments
  • Facebook Comments

0 comments:

Post a Comment

Item Reviewed: ಲೋಕಸಭಾ ಚುನಾವಣೆ ಹಿನ್ನಲೆ : ಜಿಲ್ಲಾ ಎಸ್ಪಿಯಿಂದ ವಿವಿಧ ಚೆಕ್ ಪೋಸ್ಟ್, ಹೊರ ಠಾಣೆಗಳ ಪರಿಶೀಲನೆ Rating: 5 Reviewed By: karavali Times
Scroll to Top