ಅಕ್ರಮ ಮರಳುಗಾರಿಕೆ ತಡೆ ಹಾಗೂ ಸೇತುವೆಗಳ ರಕ್ಷಣೆಗೆ ಸೀಸಿ ಟಿವಿ ಅಳವಡಿಸಲಾಗುವುದು : ಸಚಿವ ದಿನೇಶ್ ಗುಂಡೂರಾವ್ - Karavali Times ಅಕ್ರಮ ಮರಳುಗಾರಿಕೆ ತಡೆ ಹಾಗೂ ಸೇತುವೆಗಳ ರಕ್ಷಣೆಗೆ ಸೀಸಿ ಟಿವಿ ಅಳವಡಿಸಲಾಗುವುದು : ಸಚಿವ ದಿನೇಶ್ ಗುಂಡೂರಾವ್ - Karavali Times

728x90

6 February 2025

ಅಕ್ರಮ ಮರಳುಗಾರಿಕೆ ತಡೆ ಹಾಗೂ ಸೇತುವೆಗಳ ರಕ್ಷಣೆಗೆ ಸೀಸಿ ಟಿವಿ ಅಳವಡಿಸಲಾಗುವುದು : ಸಚಿವ ದಿನೇಶ್ ಗುಂಡೂರಾವ್

ಬಂಟ್ವಾಳ, ಫೆಬ್ರವರಿ 06, 2025 (ಕರಾವಳಿ ಟೈಮ್ಸ್) : ನದಿಗಳು, ಸೇತುವೆಗಳ ಬಳಿ ಮರಳುಗಾರಿಕೆ ನಡೆಯುತ್ತಿರುವುದರಿಂದ ಸೇತುವೆಗಳು ದುರ್ಬಲಗೊಳ್ಳುತ್ತಿವೆ ಎಂಬ ದೂರುಗಳು ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆದ್ದಾರಿಗಳು ಮತ್ತು ಮುಖ್ಯ ರಸ್ತೆಗಳಲ್ಲಿ ಬರುವ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳ ರಕ್ಷಣೆಗೆ ಎರಡು ಬದಿಗಳಿಗೆ ಸೀಸಿ ಟಿವಿಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

6.10 ಕೋಟಿ ರೂಪಾಯಿ ವೆಚ್ಚದಲ್ಲಿ ಪೆÇಳಲಿ-ಅಡ್ಡೂರು ಸೇತುವೆಯನ್ನು ಬಲಗೊಳಿಸುವ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬುಧವಾರ ಬೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು ಇಲ್ಲಿಗೆ ಹೊಸ ಸೇತುವೆ ಬೇಡಿಕೆ ಕುರಿತು ಶೀಘ್ರವೇ ಪ್ರಸ್ತಾವನೆ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದೇನೆ ಎಂದರು. 

ಅಂದಾಜು 9.95 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಬೋಂದೆಲ್‍ನಲ್ಲಿ ನಿರ್ಮಾಣವಾಗಲಿರುವ ರಂಗಮಂದಿರ ಕಾಮಗಾರಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ ಅವರೊಂದಿಗೆ ಚರ್ಚಿಸಿದ್ದು, ಶೀಘ್ರವೇ ಅನುಮೋದನೆ ದೊರೆಯಲಿದೆ ಎಂದರು. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಮರಳುಗಾರಿಕೆ ತಡೆ ಹಾಗೂ ಸೇತುವೆಗಳ ರಕ್ಷಣೆಗೆ ಸೀಸಿ ಟಿವಿ ಅಳವಡಿಸಲಾಗುವುದು : ಸಚಿವ ದಿನೇಶ್ ಗುಂಡೂರಾವ್ Rating: 5 Reviewed By: karavali Times
Scroll to Top