ಧರ್ಮಸ್ಥಳ ಶವ ಹೂತ ಪ್ರಕರಣ ವಿಶೇಷ ತನಿಖಾ ತಂಡಕ್ಕೆ (ಎಸ್.ಐ.ಟಿ) ವರ್ಗಾವಣೆ : ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ನಾಲ್ಕು ಮಂದಿಯ ಎಸ್.ಐ.ಟಿ. ತಂಡ ರಚಿಸಿದ ಸರಕಾರ - Karavali Times ಧರ್ಮಸ್ಥಳ ಶವ ಹೂತ ಪ್ರಕರಣ ವಿಶೇಷ ತನಿಖಾ ತಂಡಕ್ಕೆ (ಎಸ್.ಐ.ಟಿ) ವರ್ಗಾವಣೆ : ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ನಾಲ್ಕು ಮಂದಿಯ ಎಸ್.ಐ.ಟಿ. ತಂಡ ರಚಿಸಿದ ಸರಕಾರ - Karavali Times

728x90

20 July 2025

ಧರ್ಮಸ್ಥಳ ಶವ ಹೂತ ಪ್ರಕರಣ ವಿಶೇಷ ತನಿಖಾ ತಂಡಕ್ಕೆ (ಎಸ್.ಐ.ಟಿ) ವರ್ಗಾವಣೆ : ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ನಾಲ್ಕು ಮಂದಿಯ ಎಸ್.ಐ.ಟಿ. ತಂಡ ರಚಿಸಿದ ಸರಕಾರ

 ಧರ್ಮಸ್ಥಳ, ಜುಲೈ 20, 2025 (ಕರಾವಳಿ ಟೈಮ್ಸ್) : ಇಲ್ಲಿನ ಠಾಣೆಯಲ್ಲಿ ದಾಖಲಾದ ಅಪರಾಧ ಕ್ರಮಾಂಕ 39/2025ಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್.ಐ.ಟಿ.) ವರ್ಗಾಯಿಸಿ ಕರ್ನಾಟಕ ರಾಜ್ಯ ಸರಕಾರವು ಶನಿವಾರ ಆದೇಶಿಸಿದೆ. 

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಮಾಧ್ಯಮಗಳ ವರದಿ ಹಾಗೂ ಸಾಕ್ಷಿ ದೂರುದಾರ ಸಲ್ಲಿಸಿರುವ ದೂರಿನ ಆಧಾರದಲ್ಲಿ ಸರಕಾರಕ್ಕೆ ಕೋರಿಕೆ ಸಲ್ಲಿಸಿದ ಹಿನ್ನಲೆಯಲ್ಲಿ ಸರಕಾರ ಇದೀಗ ಪ್ರಕರಣದ ತನಿಖೆಗೆ ಎಸ್ ಐ ಟಿ ರಚಿಸಿ ಆದೇಶ ಹೊರಡಿಸಿದೆ. 

ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಡಾ ಪ್ರಣವ್ ಮೊಹಾಂತಿ ಅವರ ಅಧ್ಯಕ್ಷತೆಯ ನಾಲ್ಕು ಮಂದಿ ಐಪಿಎಸ್ ಅಧಿಕಾರಿಗಳ ತಂಡವನ್ನು ಸರಕಾರ ರಚಿಸಿದ್ದು, ಶೀಘ್ರದಲ್ಲೇ ವಿಶೇಷ ತನಿಖಾ ತಂಡವು ಪ್ರಕರಣವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.

  • Blogger Comments
  • Facebook Comments

0 comments:

Post a Comment

Item Reviewed: ಧರ್ಮಸ್ಥಳ ಶವ ಹೂತ ಪ್ರಕರಣ ವಿಶೇಷ ತನಿಖಾ ತಂಡಕ್ಕೆ (ಎಸ್.ಐ.ಟಿ) ವರ್ಗಾವಣೆ : ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ನಾಲ್ಕು ಮಂದಿಯ ಎಸ್.ಐ.ಟಿ. ತಂಡ ರಚಿಸಿದ ಸರಕಾರ Rating: 5 Reviewed By: lk
Scroll to Top