ದೇರಳಕಟ್ಟೆ : ಸೆಪ್ಟೆಂಬರ್ 30 ರಂದು ಮೇಲ್ತೆನೆ ದಶಮಾನೋತ್ಸವ ಕಾರ್ಯಕ್ರಮ - Karavali Times ದೇರಳಕಟ್ಟೆ : ಸೆಪ್ಟೆಂಬರ್ 30 ರಂದು ಮೇಲ್ತೆನೆ ದಶಮಾನೋತ್ಸವ ಕಾರ್ಯಕ್ರಮ - Karavali Times

728x90

23 September 2025

ದೇರಳಕಟ್ಟೆ : ಸೆಪ್ಟೆಂಬರ್ 30 ರಂದು ಮೇಲ್ತೆನೆ ದಶಮಾನೋತ್ಸವ ಕಾರ್ಯಕ್ರಮ

ಬಂಟ್ವಾಳ, ಸೆಪ್ಟೆಂಬರ್ 23, 2025 (ಕರಾವಳಿ ಟೈಮ್ಸ್) : ಬ್ಯಾರಿ ಬರಹಗಾರರು-ಕಲಾವಿದರ ಕೂಟ (ಮೇಲ್ತೆನೆ) ಇದರ ದಶಮಾನೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 30 ರಂದು ದೇರಳಕಟ್ಟೆ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್ಸಿನಲ್ಲಿ ನಡೆಯಲಿದೆ. ಮೇಲ್ತೆನೆಯ ಅಧ್ಯಕ್ಷ ವಿ ಇಬ್ರಾಹೀಂ ನಡುಪದವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಉದ್ಘಾಟಿಸುವರು. 

ಮೇಲ್ತೆನೆ ಪ್ರಕಟಿಸಿದ ‘ಮೇಲ್ತೆನೆಲ್ ಬಿರಿಂಞõÉ ಪೂವುಙ’ ಕವನ ಸಂಕಲನವನ್ನು ಬ್ಯಾರಿ ಅಕಾಡಮಿ ಅಧ್ಯಕ್ಷ ಉಮರ್ ಯು ಎಚ್ ಬಿಡುಗಡೆಗೊಳಿಸುವರು. ರಾಜ್ಯ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಸಹಿತ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 

ಇದೇ ವೇಳೆ ಹಿರಿಯ ಗಾಯಕ ರಹೀಂ ಬಿ ಸಿ ರೋಡ್ ಮೇಲ್ತೆನೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ರಾಜ್ಯ ಅಲೈಡ್ ಆಂಡ್ ಹೆಲ್ತ್‍ಕೇರ್ ಕೌನ್ಸಿಲ್ ಅಧ್ಯಕ್ಷ ಯು ಟಿ ಇಫ್ತಿಕಾರ್ ಅಲಿ ಪ್ರಶಸ್ತಿ ಪ್ರದಾನ ಮಾಡುವರು. ‘ಮಕ್ಕಳ ವಿದ್ಯಾಭ್ಯಾಸದಲ್ಲಿ ತಂದೆ-ತಾಯಿಯ ಪಾತ್ರ’ ಎಂಬ ವಿಷಯದಲ್ಲಿ ಚರ್ಚಾಗೋಷ್ಠಿ ಹಾಗೂ ಕವಿಗೋಷ್ಠಿ ನಡೆಯಲಿದೆ. 

ಕಾರ್ಯಕ್ರಮದಲ್ಲಿ ಮೆಹಂದಿ, ಆಶು ಕವನ ಮತ್ತು ಮಕ್ಕಳಿಗೆ ವಿಶೇಷ ಸ್ಪರ್ಧೆ ನಡೆಯಲಿದೆ. 2024-25ನೇ ಸಾಲಿನ ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉಳ್ಳಾಲ ತಾಲೂಕು ಮಟ್ಟದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಮೇಲ್ತೆನೆಯ ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ದೇರಳಕಟ್ಟೆ : ಸೆಪ್ಟೆಂಬರ್ 30 ರಂದು ಮೇಲ್ತೆನೆ ದಶಮಾನೋತ್ಸವ ಕಾರ್ಯಕ್ರಮ Rating: 5 Reviewed By: karavali Times
Scroll to Top