ಕರಾವಳಿ ಯಾತ್ರಿಕರ ಅನುಕೂಲಕ್ಕೆ ಮಂಗಳೂರಿನಿಂದಲೇ ಹಜ್ ವಿಮಾನ ಆರಂಭಕ್ಕೆ ಉಸ್ತುವಾರಿ ಸಚಿವರಿಂದ ಕೇಂದ್ರ ಸಚಿವರಿಗೆ ಮನವಿ - Karavali Times ಕರಾವಳಿ ಯಾತ್ರಿಕರ ಅನುಕೂಲಕ್ಕೆ ಮಂಗಳೂರಿನಿಂದಲೇ ಹಜ್ ವಿಮಾನ ಆರಂಭಕ್ಕೆ ಉಸ್ತುವಾರಿ ಸಚಿವರಿಂದ ಕೇಂದ್ರ ಸಚಿವರಿಗೆ ಮನವಿ - Karavali Times

728x90

18 October 2025

ಕರಾವಳಿ ಯಾತ್ರಿಕರ ಅನುಕೂಲಕ್ಕೆ ಮಂಗಳೂರಿನಿಂದಲೇ ಹಜ್ ವಿಮಾನ ಆರಂಭಕ್ಕೆ ಉಸ್ತುವಾರಿ ಸಚಿವರಿಂದ ಕೇಂದ್ರ ಸಚಿವರಿಗೆ ಮನವಿ

ಮಂಗಳೂರು, ಅಕ್ಟೋಬರ್ 18, 2025 (ಕರಾವಳಿ ಟೈಮ್ಸ್) :  ಕರಾವಳಿ ಜಿಲ್ಲೆಗಳ ಯಾತ್ರಿಕರಿಗೆ ಅನುಕೂಲವಾಗುವಂತೆ ಹಜ್ ಯಾತ್ರೆಗೆ ಮಂಗಳೂರಿನಿಂದಲೇ ವಿಮಾನವನ್ನು ಆರಂಭಿಸುವಂತೆ ಕೇಂದ್ರ ಸರಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.

ಈ ಸಂಬಂಧ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜುಜು ಅವರಿಗೆ  ಪತ್ರ ಬರೆದಿರುವ ಉಸ್ತುವಾರಿ ಸಚಿವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಜ್ ಎಂಬಾರ್ಕೇಶನ್ ಪಾಯಿಂಟ್ ಆಗಿ ಪರಿಗಣಿಸಿದರೆ ಇಲ್ಲಿಂದಲೇ ಹಜ್  ಯಾತ್ರೆಗೆ ನೇರ ವಿಮಾನ ಸಂಚಾರ ಆರಂಭವಾಗಿ  ಕರಾವಳಿ ಭಾಗದವರಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಮಾಜಿ ಶಾಸಕ ಕೆ.ಎಸ್ ಮೊಹಮ್ಮದ್ ಮಸೂದ್ ಅವರ ಮನವಿ ಆಧರಿಸಿ ಉಸ್ತುವಾರಿ ಸಚಿವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕರಾವಳಿ ಯಾತ್ರಿಕರ ಅನುಕೂಲಕ್ಕೆ ಮಂಗಳೂರಿನಿಂದಲೇ ಹಜ್ ವಿಮಾನ ಆರಂಭಕ್ಕೆ ಉಸ್ತುವಾರಿ ಸಚಿವರಿಂದ ಕೇಂದ್ರ ಸಚಿವರಿಗೆ ಮನವಿ Rating: 5 Reviewed By: karavali Times
Scroll to Top