ಬೊಂಡಾಲದಲ್ಲಿ ವಿದ್ಯುತ್ ಅವಘಡದಿಂದ ಮನೆಗೆ ಹಾನಿ : ಮಾಜಿ ಸಚಿವ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ - Karavali Times ಬೊಂಡಾಲದಲ್ಲಿ ವಿದ್ಯುತ್ ಅವಘಡದಿಂದ ಮನೆಗೆ ಹಾನಿ : ಮಾಜಿ ಸಚಿವ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ - Karavali Times

728x90

22 February 2020

ಬೊಂಡಾಲದಲ್ಲಿ ವಿದ್ಯುತ್ ಅವಘಡದಿಂದ ಮನೆಗೆ ಹಾನಿ : ಮಾಜಿ ಸಚಿವ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ



ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಬೊಂಡಾಲ ಕೊಡಿ ಪ್ರದೇಶದ ಕಮಲ ಶೆಟ್ಟಿಗಾರ್ ಅವರ ಮನೆಯಲ್ಲಿ ಸಂಭವಿಸಿದ ವಿದ್ಯುತ್ ಅವಘಡದಿಂದಾಗಿ ಮನೆ ಭಾಗಶಃ ಹಾನಿಗೊಳಗಾಗಿದ್ದು. ಮನೆಯಲ್ಲಿನ ಪೀಠೋಪಕರಣಗಳು, ಮನೆ ಮಂದಿ ಉಪಯೋಗಿಸುತ್ತಿದ್ದ ನಿತ್ಯದ ಸಾಮಾಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ.







    ವಿದ್ಯುತ್ ಅವಘಡಕ್ಕೊಳಗಾದ ಮನೆಗೆ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ ನೀಡಿದ್ದು, ಹಾನಿ ಹಾಗೂ ನಷ್ಟದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮನೆ ಮಂದಿಗೆ ಸಾಂತ್ವ ಹೇಳಿದರಲ್ಲದೆ ಪರಿಶೀಲನೆ ನಡೆಸಿ ಪರಿಹಾರ ನೀಡುವ ವ್ಯವಸ್ಥೆ ಮಾಡುವಂತೆ ಬಂಟ್ವಾಳ ತಹಶೀಲ್ದಾರ್ ಸಹಿತ ಕಂದಾಯ ಅಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಎಪಿಎಂಸಿ ಅಧ್ಯಕ್ಷ ಕೆ ಪದ್ಮನಾಭ ರೈ, ಪ್ರಮುಖರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಗೋಪಾಲಕೃಷ್ಣ ಮೊದಲಾದವರು ಜೊತೆಗಿದ್ದರು.

ಜಾಹೀರಾತುಗಳು 








  • Blogger Comments
  • Facebook Comments

0 comments:

Post a Comment

Item Reviewed: ಬೊಂಡಾಲದಲ್ಲಿ ವಿದ್ಯುತ್ ಅವಘಡದಿಂದ ಮನೆಗೆ ಹಾನಿ : ಮಾಜಿ ಸಚಿವ ರೈ ನೇತೃತ್ವದ ಕಾಂಗ್ರೆಸ್ ನಿಯೋಗ ಭೇಟಿ Rating: 5 Reviewed By: lk
Scroll to Top