ಎತ್ತಿನಹೊಳೆ ಎತ್ತಿ ಹಿಡಿದ ಯಡಿಯೂರಪ್ಪ ಬಜೆಟ್ : ಯೋಜನೆ ನಿಲ್ಲಿಸಲು ಪಣ ತೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ನಿಲುವಿನ ಬಗ್ಗೆ ನೆಟ್ಟಿಗರ ಪ್ರಶ್ನೆ - Karavali Times ಎತ್ತಿನಹೊಳೆ ಎತ್ತಿ ಹಿಡಿದ ಯಡಿಯೂರಪ್ಪ ಬಜೆಟ್ : ಯೋಜನೆ ನಿಲ್ಲಿಸಲು ಪಣ ತೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ನಿಲುವಿನ ಬಗ್ಗೆ ನೆಟ್ಟಿಗರ ಪ್ರಶ್ನೆ - Karavali Times

728x90

5 March 2020

ಎತ್ತಿನಹೊಳೆ ಎತ್ತಿ ಹಿಡಿದ ಯಡಿಯೂರಪ್ಪ ಬಜೆಟ್ : ಯೋಜನೆ ನಿಲ್ಲಿಸಲು ಪಣ ತೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ನಿಲುವಿನ ಬಗ್ಗೆ ನೆಟ್ಟಿಗರ ಪ್ರಶ್ನೆ



ಬೆಂಗಳೂರು (ಕರಾವಳಿ ಟೈಮ್ಸ್) : ಎತ್ತಿನಹೊಳೆ (ನೇತ್ರಾವತಿ ತಿರುವು) ಯೋಜನೆ ಪೂರ್ಣಗೊಳಿಸಲು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಗುರುವಾರ ಮಂಡಿಸಿದ ಬಜೆಟ್‍ನಲ್ಲಿ 1500 ಕೋಟಿ ರೂಪಾಯಿ ಅನುದಾನ ಘೋಸಿಸುವ ಮೂಲಕ ಎತ್ತಿನಹೊಳೆ ಯೋಜನೆಯನ್ನು ಎತ್ತಿ ಹಿಡಿದಿದ್ದಾರೆ.


    ಈ ನಡುವೆ ಕಳೆದ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ಯೋಜನೆಯನ್ನು ನಿಲ್ಲಿಸಿಯೇ ಸಿದ್ದ ಎಂದು ಪಣತೊಟ್ಟು ರಂಗಕ್ಕಿಳಿದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಇಂದಿನ ನಿಲುವು ಏನು ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ನೆಟ್ಟಿಗರು ಸಾಮಾಜಿಕ ಜಾಲ ತಾಣಗಳಲ್ಲಿ ಗಂಭೀರವಾಗಿ ಪ್ರಶ್ನಿಸಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿ ಇದ್ದ ಸಂದರ್ಭ ಆಧಾರ್ ಅನುಷ್ಠಾನದ ಬಗ್ಗೆ ತಗಾದೆ ಎತ್ತಿದ್ದ ಬಿಜೆಪಿ ಬಳಿಕ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೇರುತ್ತಲೇ ಸರ್ವ ಸರಕಾರಿ ಯೋಜನೆಗಳಿಗೂ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯಗೊಳಿಸಿದ್ದರ ಬಗ್ಗೆಯೂ ಪ್ರಸ್ತಾಪಿಸಿರುವ ನೆಟ್ಟಿಗರು ಬಿಜೆಪಿಯ ದ್ವಂದ್ವ ನಿಲುವಿನ ಬಗ್ಗೆ ಪ್ರಶ್ನಿಸಿದ್ದಾರೆ.








  • Blogger Comments
  • Facebook Comments

0 comments:

Post a Comment

Item Reviewed: ಎತ್ತಿನಹೊಳೆ ಎತ್ತಿ ಹಿಡಿದ ಯಡಿಯೂರಪ್ಪ ಬಜೆಟ್ : ಯೋಜನೆ ನಿಲ್ಲಿಸಲು ಪಣ ತೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷರ ನಿಲುವಿನ ಬಗ್ಗೆ ನೆಟ್ಟಿಗರ ಪ್ರಶ್ನೆ Rating: 5 Reviewed By: karavali Times
Scroll to Top