ಮಸೀದಿಗಳಲ್ಲಿ ಆರೋಗ್ಯ ಇಲಾಖೆಯ ಸೂಚನೆ ಪಾಲಿಸುವಂತೆ ಜಿಲ್ಲಾ ಖಾಝಿ ಕರೆ - Karavali Times ಮಸೀದಿಗಳಲ್ಲಿ ಆರೋಗ್ಯ ಇಲಾಖೆಯ ಸೂಚನೆ ಪಾಲಿಸುವಂತೆ ಜಿಲ್ಲಾ ಖಾಝಿ ಕರೆ - Karavali Times

728x90

17 March 2020

ಮಸೀದಿಗಳಲ್ಲಿ ಆರೋಗ್ಯ ಇಲಾಖೆಯ ಸೂಚನೆ ಪಾಲಿಸುವಂತೆ ಜಿಲ್ಲಾ ಖಾಝಿ ಕರೆ



ಮಂಗಳೂರು (ಕರಾವಳಿ ಟೈಮ್ಸ್) :ಕೋರೋನ ವೈರಸ್ ಬಗ್ಗೆ ಪ್ರಸ್ತುತ ರಾಜ್ಯ ಸರಕಾರದ ಆರೋಗ್ಯ ಇಲಾಖೆಯಿಂದ ಬಂದ ನಿರ್ದೇಶನದಂತೆ  ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ವುಝೂ (ಅಂಗ  ಶುದ್ದಿ) ಮಾಡುವ ನೀರಿನ (ಹೌಲ್) ಟ್ಯಾಂಕಿನಲ್ಲಿ ಇರುವ ನೀರನ್ನು ಉಪಯೋಗಿಸದೆ ಖಾಲಿ ಮಾಡಿ ಇಟ್ಟು ಕೇವಲ ಪೈಪ್ ನೀರಿನ ಮುಖಾಂತರ ವುಝೂ ಮಾಡಬೇಕೆಂದು ಹಾಗೂ ಎಲ್ಲರೂ ತಮ್ಮ ಮನೆಯಲ್ಲಿಯೇ ವುಝೂ ಮಾಡಿ ಜಮಾತಿಗೆ ಬರಬೇಕೆಂದು, ಜುಮಾ ಮತ್ತು ಜಮಾತ್ ನಮಾಝನ್ನು ಶೀಘ್ರದಲ್ಲಿ  ಮಾಡಿ ಮುಗಿಸುವಂತೆ ಮತ್ತು ಮಸೀದಿಗಳಲ್ಲಿ ಇರುವ ಹವಾ ನಿಯಂತ್ರಣ (A/C) ಗಳನ್ನು ಉಪಯೋಗಿಸದೆ ಇರುವಂತೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ  ಶೈಖುನಾ ಅಲ್-ಹಾಜ್  ತ್ವಾಖಾ ಅಹ್ಮದ್ ಮುಸ್ಲಿಯಾರ್ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಮಸೀದಿಗಳಲ್ಲಿ ಆರೋಗ್ಯ ಇಲಾಖೆಯ ಸೂಚನೆ ಪಾಲಿಸುವಂತೆ ಜಿಲ್ಲಾ ಖಾಝಿ ಕರೆ Rating: 5 Reviewed By: karavali Times
Scroll to Top