ಮಂಗಳೂರು ಸೆಂಟ್ರಲ್ ಮಾರ್ಕೆಟಲ್ಲಿ ಚಿಲ್ಲರೆ ಅಂಗಡಿದಾರರಿಗೆ ಮಾತ್ರ ಖರೀದಿಗೆ ಅವಕಾಶ : ಉಸ್ತುವಾರಿ ಸಚಿವ - Karavali Times ಮಂಗಳೂರು ಸೆಂಟ್ರಲ್ ಮಾರ್ಕೆಟಲ್ಲಿ ಚಿಲ್ಲರೆ ಅಂಗಡಿದಾರರಿಗೆ ಮಾತ್ರ ಖರೀದಿಗೆ ಅವಕಾಶ : ಉಸ್ತುವಾರಿ ಸಚಿವ - Karavali Times

728x90

25 March 2020

ಮಂಗಳೂರು ಸೆಂಟ್ರಲ್ ಮಾರ್ಕೆಟಲ್ಲಿ ಚಿಲ್ಲರೆ ಅಂಗಡಿದಾರರಿಗೆ ಮಾತ್ರ ಖರೀದಿಗೆ ಅವಕಾಶ : ಉಸ್ತುವಾರಿ ಸಚಿವ



ಮಂಗಳೂರು (ಕರಾವಳಿ ಟೈಮ್ಸ್) : ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‍ನಲ್ಲಿ ಜನಜಂಗುಳಿ ನಿಯಂತ್ರಿಸುವ ಉದ್ದೇಶದಿಂದ ಮಾ 26 ರಿಂದ ಲಾಕ್ ಡೌನ್ ಮುಗಿಯುವವರೆಗೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಚಿಲ್ಲರೆ ಅಂಗಡಿದಾರರಿಗೆ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಬುಧವಾರ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು ಸೆಂಟ್ರಲ್ ಮಾರ್ಕೆಟಲ್ಲಿ ನಿತ್ಯ ಜನ ಜಂಗುಳಿ ಕಂಡು ಬರುತ್ತಿದ್ದು, ಇದು ಕೊರೋನಾ ಸೋಂಕಿಗೆ ಪೂರಕ ವಾತಾವರಣ ಸೃಷ್ಟಿಸುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಇಲ್ಲಿ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಖರೀದಿಗೆ ಅವಕಾಶ ಕೊಡುವುದಿಲ್ಲ. ಚಿಲ್ಲರೆ ಅಂಗಡಿದಾರರು ಮಾತ್ರ ಇಲ್ಲಿ ಖರೀದಿಸಬೇಕು.

    ಸಾರ್ವಜನಿಕರು ದಿನಸಿ ಅಂಗಡಿಗಳಿಂದ ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಖರೀದಿ ನಡೆಸಬಹುದು ಎಂದು ಸಚಿವರು ತಿಳಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಸೆಂಟ್ರಲ್ ಮಾರ್ಕೆಟಲ್ಲಿ ಚಿಲ್ಲರೆ ಅಂಗಡಿದಾರರಿಗೆ ಮಾತ್ರ ಖರೀದಿಗೆ ಅವಕಾಶ : ಉಸ್ತುವಾರಿ ಸಚಿವ Rating: 5 Reviewed By: karavali Times
Scroll to Top