ಬಲಿಷ್ಠ ವರ್ಗಕ್ಕೆ ಸರಕಾರ ಮಣೆ : ಸ್ವಪಕ್ಷದ ಸರಕಾರದ ವಿರುದ್ದವೇ ತುಂಗಪ್ಪ ಬಂಗೇರ ಗರಂ - Karavali Times ಬಲಿಷ್ಠ ವರ್ಗಕ್ಕೆ ಸರಕಾರ ಮಣೆ : ಸ್ವಪಕ್ಷದ ಸರಕಾರದ ವಿರುದ್ದವೇ ತುಂಗಪ್ಪ ಬಂಗೇರ ಗರಂ - Karavali Times

728x90

17 March 2020

ಬಲಿಷ್ಠ ವರ್ಗಕ್ಕೆ ಸರಕಾರ ಮಣೆ : ಸ್ವಪಕ್ಷದ ಸರಕಾರದ ವಿರುದ್ದವೇ ತುಂಗಪ್ಪ ಬಂಗೇರ ಗರಂ








ಬಂಟ್ವಾಳ (ಕರಾವಳಿ ಟೈಮ್ಸ್) :  ಒಳ ಮೀಸಲಾತಿ ಜಾರಿಗೆ ತರುವಂತೆ  ಜಿ.ಪಂ. ಸದಸ್ಯ ತುಂಗಪ್ಪ ಬಂಗೇರ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

  ಪ್ರಸ್ತುತ ಇರುವ ಮೀಸಲಾತಿ ಯಿಂದಾಗಿ ಬಡ ಕುಟುಂಬದ ಜನರಿಗೆ ಸರಕಾರದ ಉದ್ಯೋಗ ಹಾಗೂ ಸರಕಾರದ ಸವಲತ್ತುಗಳನ್ನು ಪಡೆಯಲು ಬಹಳಷ್ಟು ಅನ್ಯಾಯವಾಗುತ್ತಿದೆ. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಒಳಮೀಸಲಾತಿ ಜಾರಿಗೆ ಬರಬೇಕಾಗಿದೆ ಎಂವರು ತಿಳಿಸಿದ್ದಾರೆ.

ಬಡಜನರಿಗೆ  ಅನ್ಯಾಯವಾಗುವುದರಿಂದ ಪ್ರಸ್ತುತ ಇರುವ ಮೀಸಲಾತಿ ಯಲ್ಲಿ ಒಳಮೀಸಲಾತಿಯನ್ನು ಸರಕಾರದ ತಕ್ಷಣ ಜಾರಿಗೆ ತರಬೇಕು ಎಂದು ಸಿ.ಎಂ.ಯಡಿಯೂರಪ್ಪ ಅವರನ್ನು ಒತ್ತಾಯ ಮಾಡಿದ್ದಾರೆ.

   ಈ ಹಿನ್ನೆಲೆಯಲ್ಲಿ  ಬಡವರ ಪಾಲಿಗೆ ಸರಕಾರದ ಕರುಣೆ ತೋರಬೇಕಾಗಿದೆ. ಸರಕಾರ ಈ ಬಗ್ಗೆ ಗಮನಹರಿಸದಿದ್ದರೆ ಎಲ್ಲ ಹಿಂದುಳಿದ ವರ್ಗಗಳನ್ನು ಒಂದುಗೂಡಿಸಿ ದೊಡ್ಡ ಮಟ್ಟದಲ್ಲಿ ಸಮಾವೇಶ ನಡೆಸುವ ಮೂಲಕ ಸರಕಾರವನ್ನು ಎಚ್ಚರಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಲಿಷ್ಠ ವರ್ಗಕ್ಕೆ ಸರಕಾರ ಮಣೆ : ಸ್ವಪಕ್ಷದ ಸರಕಾರದ ವಿರುದ್ದವೇ ತುಂಗಪ್ಪ ಬಂಗೇರ ಗರಂ Rating: 5 Reviewed By: karavali Times
Scroll to Top