ಅನಂತಾಡಿ : ಕೋಸ್ಟಲ್ ಸಂಸ್ಥೆಯ ವತಿಯಿಂದ ರೇಶನ್ ಕಿಟ್ ವಿತರಣೆ - Karavali Times ಅನಂತಾಡಿ : ಕೋಸ್ಟಲ್ ಸಂಸ್ಥೆಯ ವತಿಯಿಂದ ರೇಶನ್ ಕಿಟ್ ವಿತರಣೆ - Karavali Times

728x90

26 April 2020

ಅನಂತಾಡಿ : ಕೋಸ್ಟಲ್ ಸಂಸ್ಥೆಯ ವತಿಯಿಂದ ರೇಶನ್ ಕಿಟ್ ವಿತರಣೆ



ವಿಟ್ಲ (ಕರಾವಳಿ ಟೈಮ್ಸ್) : ಅನಂತಾಡಿ ಗ್ರಾಮದ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ, ಕೋಸ್ಟಲ್ ಸಂಸ್ಥೆಯ ಮಾಲೀಕ ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ ಅನಂತಾಡಿಯಲ್ಲಿ ಲಾಕ್‍ಡೌನ್ ಸಂಕಷ್ಟಕ್ಕೊಳಗಾದ 180 ಬಡ ಕುಟುಂಬಗಳಿಗೆ ಭಾನುವಾರ ಸುಮಾರು 80,000 ರೂಪಾಯಿ ಮೌಲ್ಯದ ಆಹಾರದ ಕಿಟ್ ವಿತರಿಸಲಾಯಿತು.

ಈ ಸಂದರ್ಭ ಬಿ.ಎ.ಎಸ್.ಎಫ್ ಕಂಪೆನಿಯ ನಿವೃತ್ತ ಮುಖ್ಯಸ್ಥ ಪುರಂದರ ಶೆಟ್ಟಿ, ತುಂಬೆ ಕಾಲೇಜು ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಜಯಂತಿ ಪೂಜಾರಿ, ನಾರಾಯಣ ಸಾಲ್ಯಾನ್, ಪುರಂದರ ಗೌಡ ತಾಳಿಪಡ್ಪು, ಪ್ರಸಾದ್, ನವೀನ್, ವಿಠಲ, ಕೃಷ್ಣಪ್ರಸಾದ್ ರೈ, ಮೋನಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು. 
  • Blogger Comments
  • Facebook Comments

0 comments:

Post a Comment

Item Reviewed: ಅನಂತಾಡಿ : ಕೋಸ್ಟಲ್ ಸಂಸ್ಥೆಯ ವತಿಯಿಂದ ರೇಶನ್ ಕಿಟ್ ವಿತರಣೆ Rating: 5 Reviewed By: karavali Times
Scroll to Top