ಎಪ್ರಿಲ್ 2 ರಂದು ಬೆಳಿಗ್ಗೆ 7 ರಿಂದ 12ರವರಗೆ ದಿನಸಿ ಅಂಗಡಿಗಳು ಓಪನ್, ವದಂತಿಗಳಿಗೆ ಮನ್ನಣೆ ಬೇಡ : ಜಿಲ್ಲಾಧಿಕಾರಿ - Karavali Times ಎಪ್ರಿಲ್ 2 ರಂದು ಬೆಳಿಗ್ಗೆ 7 ರಿಂದ 12ರವರಗೆ ದಿನಸಿ ಅಂಗಡಿಗಳು ಓಪನ್, ವದಂತಿಗಳಿಗೆ ಮನ್ನಣೆ ಬೇಡ : ಜಿಲ್ಲಾಧಿಕಾರಿ - Karavali Times

728x90

1 April 2020

ಎಪ್ರಿಲ್ 2 ರಂದು ಬೆಳಿಗ್ಗೆ 7 ರಿಂದ 12ರವರಗೆ ದಿನಸಿ ಅಂಗಡಿಗಳು ಓಪನ್, ವದಂತಿಗಳಿಗೆ ಮನ್ನಣೆ ಬೇಡ : ಜಿಲ್ಲಾಧಿಕಾರಿ




ಮಂಗಳೂರು (ಕರಾವಳಿ ಟೈಮ್ಸ್) : ಈಗಾಗಲೇ ಮಾ 31 ರಂದು ಹೊರಡಿಸಿದ ಆದೇಶದಂತೆ ಎಪ್ರಿಲ್ 1ರಂತೆಯೇ ಎಪ್ರಿಲ್ 2 ರಂದು ಕೂಡಾ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅಗತ್ಯ ಸಾಮಾಗ್ರಿಗಳ ಅಂಗಡಿಗಳು ತೆರೆಯಲಿದ್ದು, ಉಳಿದಂತೆ ಎಲ್ಲ ನಿರ್ಬಂಧಗಳು ಯಥಾ ಸ್ಥಿತಿ ಮುಂದುವರಿಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶದಲ್ಲಿ ತಿಳಿಸಿದ್ದಾರೆ.

    ಎಪ್ರಿಲ್ 2 ಗುರುವಾರ ಸಂಪೂರ್ಣ ಸ್ತಬ್ಧವಾಗಲಿದೆ ಎಂಬ ಕೆಲವೊಂದು ಫೇಕ್ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಮಂಗಳೂರು ಪೊಲೀಸ್ ಆಯುಕ್ತರ ಹಿಂದಿನ ಧ್ವನಿಮುದ್ರಣ ಕ್ಲಿಪ್‍ಗಳನ್ನು ಕಿಡಿಗೇಡಿಗಳು ಮರು ರವಾನಿಸಿ ಸಮಾಜದಲ್ಲಿ ಗೊಂದಲ ಹಾಗೂ ಆತಂಕವನ್ನು ಸೃಷ್ಟಿಸಿ ಹಾಕುತ್ತಿರುವುದು ಗಮನಕ್ಕೆ ಬಂದಿದ್ದು, ಇಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿರುವ ಡೀಸಿ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ತಮ್ಮ ಅಗತ್ಯ ಸೇವೆಗಳನ್ನು ಪಡೆದುಕೊಂಡು ಮನೆಯಲ್ಲೇ ಉಳಿದುಕೊಳ್ಳುವ ಮೂಲಕ ಸ್ವಯಂನಿಯಂತ್ರಣ ಸಾಧಿಸುವಂತೆ ಸೂಚಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಎಪ್ರಿಲ್ 2 ರಂದು ಬೆಳಿಗ್ಗೆ 7 ರಿಂದ 12ರವರಗೆ ದಿನಸಿ ಅಂಗಡಿಗಳು ಓಪನ್, ವದಂತಿಗಳಿಗೆ ಮನ್ನಣೆ ಬೇಡ : ಜಿಲ್ಲಾಧಿಕಾರಿ Rating: 5 Reviewed By: karavali Times
Scroll to Top