ಕಾರ್ಮಿಕರಿಗಾಗಿ ಲಾಕ್‍ಡೌನ್ ನಿಯಮ ಕೊಂಚ ಸಡಿಲಿಸಿದ ಕೇಂದ್ರ ಸರಕಾರ - Karavali Times ಕಾರ್ಮಿಕರಿಗಾಗಿ ಲಾಕ್‍ಡೌನ್ ನಿಯಮ ಕೊಂಚ ಸಡಿಲಿಸಿದ ಕೇಂದ್ರ ಸರಕಾರ - Karavali Times

728x90

20 April 2020

ಕಾರ್ಮಿಕರಿಗಾಗಿ ಲಾಕ್‍ಡೌನ್ ನಿಯಮ ಕೊಂಚ ಸಡಿಲಿಸಿದ ಕೇಂದ್ರ ಸರಕಾರ



ನವದೆಹಲಿ (ಕರಾವಳಿ ಟೈಮ್ಸ್) : ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ ಕೊಂಚ ಸರಳಗೊಳಿಸಿದೆ. ಲಾಕ್‍ಡೌನ್ ಸಮಯದಲ್ಲಿ ಕಾರ್ಮಿಕರು ಕೆಲವು ಷರತ್ತುಗಳೊಂದಿಗೆ ರಾಜ್ಯದ ಒಳಗಿನ ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುನ್ಯಾ ಸಲೀಲಾ ಶ್ರೀವಾಸ್ತವ್, ಕೊರೊನಾ ಹಾವಳಿ ಹೆಚ್ಚು  ಪ್ರಭಾವ  ಬೀರಿರದ ಪ್ರದೇಶಗಳಲ್ಲಿ ಇಂದಿನಿಂದ ಲಾಕ್‍ಡೌನ್‍ನಲ್ಲಿ ಸಡಿಲಿಕೆ ಮಾಡಲಾಗುವುದು. ಇದರಿಂದ ಕಾರ್ಮಿಕರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ. ಇದು ಕೈಗಾರಿಕೆ ಮತ್ತು  ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು.

ಇನ್ನು ಕಾರ್ಮಿಕರು ಲಾಕ್‍ಡೌನ್ ಸಮಯದಲ್ಲಿ ಷರತ್ತುಗಳೊಂದಿಗೆ ರಾಜ್ಯದ ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶವಿದೆ. ಆದರೆ ಯಾವುದೇ ಕಾರ್ಮಿಕರು ಕೂಲಿಗಾಗಿ ರಾಜ್ಯದ ಹೊರಗೆ ಹೋಗುವಂತಿಲ್ಲ ಎಂದೂ ಹೇಳಲಾಗಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕಾರ್ಮಿಕರಿಗಾಗಿ ಲಾಕ್‍ಡೌನ್ ನಿಯಮ ಕೊಂಚ ಸಡಿಲಿಸಿದ ಕೇಂದ್ರ ಸರಕಾರ Rating: 5 Reviewed By: karavali Times
Scroll to Top