ಪುದು : ತೇವು ತಾರಾನಾಥ ಕೊಟ್ಟಾರಿಯವರಿಂದ ಬಡವರಿಗೆ ಜೀವನಾಶ್ಯಕ ಸಾಮಾಗ್ರಿ ವಿತರಣೆ - Karavali Times ಪುದು : ತೇವು ತಾರಾನಾಥ ಕೊಟ್ಟಾರಿಯವರಿಂದ ಬಡವರಿಗೆ ಜೀವನಾಶ್ಯಕ ಸಾಮಾಗ್ರಿ ವಿತರಣೆ - Karavali Times

728x90

26 April 2020

ಪುದು : ತೇವು ತಾರಾನಾಥ ಕೊಟ್ಟಾರಿಯವರಿಂದ ಬಡವರಿಗೆ ಜೀವನಾಶ್ಯಕ ಸಾಮಾಗ್ರಿ ವಿತರಣೆ



ಬಂಟ್ವಾಳ (ಕರಾವಳಿ ಟೈಮ್ಸ್) : ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಪುದು ಗ್ರಾಮದ 13 ಕುಟುಂಬಗಳಿಗೆ ತಾರಾನಾಥ ಕೊಟ್ಟರಿ ತೇವು ಅವರ ವತಿಯಿಂದ ಅಕ್ಕಿ ಸಹಿತ 10 ಬಗೆಯ ಜೀವನಾವಶ್ಯಕ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಫರಂಗಿಪೇಟೆ ಹೊಳೆಬದಿಯ 5 ಕುಟುಂಬಗಳು, ಪದೆಂಜಾರು-ತೇವು ಪರಿಸರದ 6 ಕುಟುಂಬಗಳು ಹಾಗೂ ನಡುಬೈಲುವಿನ 2 ಕುಟುಂಬಗಳಿಗೆ ಈ ರೇಶನ್ ಕಿಟ್ ವಿತರಿಸಲಾಯಿತು. ದಿನೇಶ್ ಶೆಟ್ಟಿ ಕೊಟ್ಟಂಜ, ನಾಗೇಶ್ ಕೊಟ್ಟಾರಿ ತೇವು, ಶರತ್ ಕೊಟ್ಟಿಂಜ ಸಹಕರಿಸಿದರು.

ತಾರಾನಾಥ ಕೊಟ್ಟಾರಿ ತೇವು ಅವರು ಈಗಾಗಲೇ ಪುದು ಗ್ರಾಮ ಮಾತ್ರವಲ್ಲದೆ ಬೆಂಜನ ಪದವು, ಜ್ಯೋತಿಗುಡ್ಡೆ, ವಳಚ್ಚಿಲ್, ಮಂಗಳೂರು ಪರಿಸರದ ಸುಮಾರು 60 ಕ್ಕಿಂತಲೂ ಮಿಕ್ಕಿದ ಕುಟುಂಬಗಳಿಗೆ ಅಕ್ಕಿ ಸಹಿತ ಜೀವನಾವಶ್ಯಕ ಸಾಮಗ್ರಿಗಳನ್ನು ವಿತರಿಸಿದ್ದು, ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವವರಿಗೆ ಆಸರೆಯಾಗಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಪುದು : ತೇವು ತಾರಾನಾಥ ಕೊಟ್ಟಾರಿಯವರಿಂದ ಬಡವರಿಗೆ ಜೀವನಾಶ್ಯಕ ಸಾಮಾಗ್ರಿ ವಿತರಣೆ Rating: 5 Reviewed By: karavali Times
Scroll to Top