ಮಂಗಳೂರು (ಕರಾವಳಿ ಟೈಮ್ಸ್) : ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರನ್ನು ಬಂಧಿಸಿ ಎಂಬ ಅಭಿಯಾನ ಟ್ವಿಟ್ಟರ್ ನಲ್ಲಿ ಆರಂಭವಾಗಿದೆ. ಇಡೀ ದೇಶ ಕೊರೋನಾ ಸೋಂಕಿನ ವಿರುದ್ದ ಸೆಣಸುತ್ತಿರುವ ಮಧ್ಯೆ ಸಂಸದೆ ಶೋಭಾ ಕರಂದ್ಲಾಜೆ ಜನರಲ್ಲಿ ದ್ವೇಷದ ಭಾವನೆಯನ್ನು ಹರಡುತ್ತಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ವಿವಾದಿತ ಹೇಳಿಕೆಗಳು ಮತ್ತು ಮಾತುಗಳಿಂದ ಆಗಾಗ ಸುದ್ದಿಯಾಗುವ ಮಾಜಿ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಇತ್ತೀಚೆಗೆ ಗ್ರೀನ್ ಝೋನ್ ಆಗಿದ್ದ ಶಿವಮೊಗ್ಗದಲ್ಲಿ ತಬ್ಲಿಘಿಗಳಿಂದ ಸೋಂಕು ಹರಡಿ ಏಳು ಮಂದಿಗೆ ಸೋಂಕು ಹರಡಿದ್ದ ಬಗ್ಗೆ ಟ್ವೀಟ್ ಮಾಡಿ ತಬ್ಲಿಘಿಗಳು ದೇಶಕ್ಕೆ ಕಂಟಕ ಎಂದು ಬರೆದಿದ್ದರು.
ಸಂಸದೆಯ ಈ ಟ್ವೀಟ್ ಬಗ್ಗೆ ವ್ಯಾಪಕ ಆಕ್ರೋಶ ಭುಗಿಲೆದ್ದಿದ್ದು, ಸಾವಿರಾರು ಟ್ವೀಟ್ಗಳಲ್ಲಿ ಅವರ ವಿರುದ್ಧ ಟೀಕೆಗಳ ಸುರಿಮಳೆಯೇ ಹರಿಯಲಾರಂಭಿಸಿದೆ. “ಅರೆಸ್ಟ್ ಶೋಭಾ ಕರಂದ್ಲಾಜೆ” ಎಂದು ಹ್ಯಾಶ್ ಟಾಗ್ ಮಾಡಿ ಅವರನ್ನು ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ದೇಶದಲ್ಲಿ ವಿವಿಧ ಜಾತಿ, ಧರ್ಮಗಳ ನಡುವೆ ದ್ವೇಷದ ಕಿಚ್ಚು ಹತ್ತಿಸುವ ಶೋಭಾ ಕರಂದ್ಲಾಜೆಯವರನ್ನು ಭಾರತೀಯ ದಂಡ ಸಂಹಿತೆ 153(ಎ)ಯಡಿ ಬಂಧಿಸಿ ಎಂದು ಆಗ್ರಹಿಸುವ ಟ್ವೀಟ್ಗಳು ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿದೆ.
0 comments:
Post a Comment