ಎಂಟು ಮಂದಿ ಪೊಲೀಸರ ಹತ್ಯಾ ಆರೋಪಿ, ಕುಖ್ಯಾತ ರೌಡಿ ಎನ್ ಕೌಂಟರಿನಲ್ಲಿ ಫಿನಿಶ್ - Karavali Times ಎಂಟು ಮಂದಿ ಪೊಲೀಸರ ಹತ್ಯಾ ಆರೋಪಿ, ಕುಖ್ಯಾತ ರೌಡಿ ಎನ್ ಕೌಂಟರಿನಲ್ಲಿ ಫಿನಿಶ್ - Karavali Times

728x90

9 July 2020

ಎಂಟು ಮಂದಿ ಪೊಲೀಸರ ಹತ್ಯಾ ಆರೋಪಿ, ಕುಖ್ಯಾತ ರೌಡಿ ಎನ್ ಕೌಂಟರಿನಲ್ಲಿ ಫಿನಿಶ್



ಲಕ್ನೋ (ಕರಾವಳಿ ಟೈಮ್ಸ್) : ಎಂಟು ಮಂದಿ ಪೊಲೀಸರ ಹತ್ಯಾ ಆರೋಪಿ, ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆ ಶುಕ್ರವಾರ ಮುಂಜಾನೆ ನಡೆದ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ್ದಾನೆ.

ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದರು. ಆತನನ್ನು ಮಧ್ಯಪ್ರದೇಶ ಪೊಲೀಸರು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದು, ಕಾನ್ಪುರಕ್ಕೆ ಕರೆತರುವ ವೇಳೆ ಪೊಲೀಸರ ಬೆಂಗಾವಲು ವಾಹನ ಮಗುಚಿದೆ. ಈ ನಡುವೆ ಪರಾರಿಯಾಗಲು ಯತ್ನಿಸಿದ ವಿಕಾಸ್‌ ದುಬೆ ಎನ್‌ಕೌಂಟರ್‌ನಿಂದ ಸಾವನ್ನಪ್ಪಿರುವುದಾಗಿ ಉತ್ತರ ಪ್ರದೇಶ ಪೊಲೀಸರು ದೃಢಪಡಿಸಿದ್ದಾರೆ.

ವಾಹನ ಉರುಳುವ ಮೊದಲು ಗುಂಡಿನ ಸದ್ದು ಕೇಳಿಸಿತು. ಮಳೆಯಿಂದ ತೊಯ್ದಿದ್ದ ರಸ್ತೆಯಲ್ಲಿ ವಾಹನ ಪಲ್ಟಿಯಾಯಿತು. ಈ ವೇಳೆ ಜೊತೆಗಿದ್ದ ಪೊಲೀಸರಿಂದ ರಿವಲ್ವಾರ್ ಕಸಿದು ವಿಕಾಸ್ ದುಬೆ ಪರಾರಿಯಾಗಲು ಯತ್ನಿಸಿದ್ದ ಎಂದು ಹೇಳಿದ್ದಾರೆ. ಅಪಘಾತದ ಬೆನ್ನಲ್ಲೆ ವಿಕಾಸ್‌ ದುಬೆ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ವಿಕಾಸ್‌ ದುಬೆ ಮೃತಪಟ್ಟಿದ್ದಾನೆ ಎಂದು ಕಾನ್ಪುರ ಐಜಿ ಮೋಹಿತ್‌ ಅಗರ್ವಾಲ್‌ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.








  • Blogger Comments
  • Facebook Comments

0 comments:

Post a Comment

Item Reviewed: ಎಂಟು ಮಂದಿ ಪೊಲೀಸರ ಹತ್ಯಾ ಆರೋಪಿ, ಕುಖ್ಯಾತ ರೌಡಿ ಎನ್ ಕೌಂಟರಿನಲ್ಲಿ ಫಿನಿಶ್ Rating: 5 Reviewed By: karavali Times
Scroll to Top