ಪರಾರಿಯಾಗಲೆತ್ನಿಸಿದ ಕಾರನ್ನು ಬೆನ್ನತ್ತಿ ದನ ಸಾಗಾಟ ಬೇಧಿಸಿದ ಬಂಟ್ವಾಳ ಪೊಲೀಸ್ - Karavali Times ಪರಾರಿಯಾಗಲೆತ್ನಿಸಿದ ಕಾರನ್ನು ಬೆನ್ನತ್ತಿ ದನ ಸಾಗಾಟ ಬೇಧಿಸಿದ ಬಂಟ್ವಾಳ ಪೊಲೀಸ್ - Karavali Times

728x90

28 July 2020

ಪರಾರಿಯಾಗಲೆತ್ನಿಸಿದ ಕಾರನ್ನು ಬೆನ್ನತ್ತಿ ದನ ಸಾಗಾಟ ಬೇಧಿಸಿದ ಬಂಟ್ವಾಳ ಪೊಲೀಸ್




ಬಂಟ್ವಾಳ (ಕರಾವಳಿ ಟೈಮ್ಸ್) : ಅಕ್ರಮ ದನ ಸಾಗಾಟ ನಡೆಸುತ್ತಿದ್ದ ಓಮ್ನಿ ಕಾರನ್ನು ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ನೇತೃತ್ವದ ಪೊಲೀಸರು ಸೋಮವಾರ ರಾತ್ರಿ ಬೆನ್ನಟ್ಟಿ ಹಿಡಿದಿದ್ದಾರೆ. 

ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಾರ್ನಬೈಲ್ ಎಂಬಲ್ಲಿ ಎಂಬಲ್ಲಿ ಸೋಮವಾರ ರಾತ್ರಿ ಗಸ್ತಿನಲ್ಲಿದ್ದ ಎಸ್ಸೈ ಅವಿನಾಶ್ ಅವರು ಓಮ್ನಿ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕ ಅತೀವೇಗವಾಗಿ ಕಾರನ್ನು ಚಲಾಯಿಸಿದ್ದು, ಮಾರ್ನಬೈಲ್ ತಿರುವಿನಲ್ಲಿ ನಂದಾವರ ರಸ್ತೆ ಮೂಲಕ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭ ಕಾರ್ಯಪ್ರವೃತ್ತರಾದ ಪೊಲೀಸರು ಕಾರನ್ನು ಬೆನ್ನಟ್ಟಿದ್ದು, ನಂದಾವರ ಪರಿಸರಕ್ಕೆ ಕಾರು ತಲುಪಿದಾಗ ಚಾಲಕ ಕಾರನ್ನು ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿ ಚಾಲಕ ಸಹಿತ ಕಾರಿನಲ್ಲಿದ್ದವರು ಪೊಲೀಸರ ಕೈಗೆ ಸಿಗದೆ ಓಡಿ ಪರಾರಿಯಾಗಿದ್ದಾರೆ. ಪೊಲೀಸರು ಓಮ್ನಿ ಕಾರು ಅದರೊಳಗೆ ಕಟ್ಟಿ ಹಾಕಲಾಗಿದ್ದ ದನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 








  • Blogger Comments
  • Facebook Comments

0 comments:

Post a Comment

Item Reviewed: ಪರಾರಿಯಾಗಲೆತ್ನಿಸಿದ ಕಾರನ್ನು ಬೆನ್ನತ್ತಿ ದನ ಸಾಗಾಟ ಬೇಧಿಸಿದ ಬಂಟ್ವಾಳ ಪೊಲೀಸ್ Rating: 5 Reviewed By: karavali Times
Scroll to Top