ದಾಸಕೋಡಿ ರಸ್ತೆ ಬದಿಗೆ ನುಗ್ಗಿದ ಕಾರು : ತುಳು ನಟರಿಬ್ಬರು ಅದೃಷ್ಟವಶಾತ್ ಪಾರು - Karavali Times ದಾಸಕೋಡಿ ರಸ್ತೆ ಬದಿಗೆ ನುಗ್ಗಿದ ಕಾರು : ತುಳು ನಟರಿಬ್ಬರು ಅದೃಷ್ಟವಶಾತ್ ಪಾರು - Karavali Times

728x90

2 August 2020

ದಾಸಕೋಡಿ ರಸ್ತೆ ಬದಿಗೆ ನುಗ್ಗಿದ ಕಾರು : ತುಳು ನಟರಿಬ್ಬರು ಅದೃಷ್ಟವಶಾತ್ ಪಾರು



ಬಂಟ್ವಾಳ (ಕರಾವಳಿ ಟೈಮ್ಸ್) :
ತಾಲೂಕಿನ ಸೂರಿಕುಮೇರು ಸಮೀಪದ ದಾಸಕೋಡಿ ಎಂಬಲ್ಲಿ ಭಾನುವಾರ ಅಪರಾಹ್ನ ಕಾರು ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಗೆ ನುಗ್ಗಿದ ಪರಿಣಾಮ ತುಳು ಹಾಸ್ಯ ನಟರಾದ ಸುಂದರ ರೈ ಮಂದಾರ ಹಾಗೂ ಚಂದ್ರಹಾಸ ಚಂದ್ರಹಾಸ ಅನಂತಾಡಿ ಅವರು ಯಾವುದೇ ಅಪಾಯವಿಲ್ಲದೆ ಪವಾಡ ಸದೃಶ ಪಾರಾಗಿದ್ದಾರೆ.

    ಮಂಗಳೂರಿನಿಂದ ಮಾಣಿ ಕಡೆಗೆ ಇವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಳಿಕ ಕಾರು ರಸ್ತೆ ಬದಿಯಲ್ಲಿ ನುಗ್ಗಿ ನಿಂತಿದೆ. ಭಾರೀ ಮಳೆ ಸುರಿಯುತ್ತಿದ್ದುದರಿಂದ ಚಾಲಕಗೆ ರಸ್ತೆ ಕಾಣದೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕಾರಿನ ಮೇಲ್ಭಾಗದಲ್ಲೇ ವಿದ್ಯುತ್ ತಂತಿಗಳು ನೇತಾಡುತ್ತಿದ್ದರೂ ಯಾವುದೇ ಅಪಾಯವಿಲ್ಲದೆ ಇಬ್ಬರು ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






  • Blogger Comments
  • Facebook Comments

0 comments:

Post a Comment

Item Reviewed: ದಾಸಕೋಡಿ ರಸ್ತೆ ಬದಿಗೆ ನುಗ್ಗಿದ ಕಾರು : ತುಳು ನಟರಿಬ್ಬರು ಅದೃಷ್ಟವಶಾತ್ ಪಾರು Rating: 5 Reviewed By: karavali Times
Scroll to Top